Advertisement

Gopalaswamy Hill: ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನ; ಯಾರು ಹೊಣೆ?

02:18 PM Aug 22, 2023 | Team Udayavani |

ಗುಂಡ್ಲುಪೇಟೆ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಾಗೂ ಪ್ರವಾಸಿ ತಾಣ ಹಿಮ ವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನ ನಿಷೇಧವಿದ್ದರೂ ಮಂಡ್ಯ ಶಾಸಕ ರವಿ ಗಾಣಿಗ ಖಾಸಗಿ ವಾಹನದಲ್ಲಿ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿರುವುದು ಪರಿಸರ ವಾದಿಗಳ ಆಕೊ›àಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಶಾಸಕರಿಗೆ ಒಂದು ನ್ಯಾಯ, ಭಕ್ತರಿಗೆ ಒಂದು ನ್ಯಾಯವಾ ಎಂದು ಕ್ಷೇತ್ರದ ಜನತೆ ಪ್ರಶ್ನಿಸುತ್ತಿದ್ದಾರೆ.

Advertisement

ಅಲ್ಲದೇ, ಬೆಟ್ಟಕ್ಕೆ ಖಾಸಗಿ ವಾಹನ ನಿಷೇಧದ ಬಗ್ಗೆ ಕೆಲವು ಪ್ರವಾಸಿಗರಿಗೆ ಮಾಹಿತಿ ಕೊರತೆ ಇರುವ ಕಾರಣ ಅರಣ್ಯ ಇಲಾಖೆಯಿಂದ ಅರಿವು ಮೂಡಿಸಬೇಕಿದೆ.

ಸಮುದ್ರ ಮಟ್ಟದಿಂದ 4, 770 ಅಡಿ ಎತ್ತರದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ 700 ವರ್ಷಗಳ ಇತಿಹಾಸವಿದೆ. ಕೇರಳ ಹಾಗೂ ತಮಿಳುನಾಡು ನೀಲಗಿರಿ , ರಾಜ್ಯ ಅರಣ್ಯ ಹಂಚಿಕೊಂಡಿರುವ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಗೋಪಾಲಸ್ವಾಮಿ ಬೆಟ್ಟ ಇರುವ ಕಾರಣ ರಾಜ್ಯದ ವಿವಿಧ ಜಿಲ್ಲೆ ಸೇರಿ ತಮಿಳುನಾಡು ಮತ್ತು ಕೇರಳದಿಂದ ನಿತ್ಯ ಸಾಕಷ್ಟು ಭಕ್ತರು, ಪರಿಸರ ಪ್ರಿಯರು ಆಗಮಿಸುತ್ತಾರೆ.

 2015ರಿಂದ ಖಾಸಗಿ ವಾಹನ ನಿಷೇಧ: ಹಲವು ವರ್ಷಗಳಿಂದಲೂ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನ ಅಧಿಕ ಸಂಖ್ಯೆಯಲ್ಲಿ ತೆರಳುತ್ತಿದ್ದ ಹಿನ್ನೆಲೆ ವನ್ಯ ಪ್ರಾಣಿಗಳ ಸಹಜ ಜೀವನ ಶೈಲಿಗೆ ತೊಂದರೆಯಾಗುತ್ತಿತ್ತು. ಜತೆಗೆ ದೇವಸ್ಥಾನದ ಬದಿ ಖಾಸಗಿ ವಾಹನ ನಿಲ್ಲಿಸಿ ಬೆಟ್ಟಕ್ಕೆ ಆಗಮಿಸುವ ಭಕ್ತರು ಪ್ಲಾಸ್ಟಿಕ್‌ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು. ಇದು ಪರಿಸರದ ಮೇಲೆ ದುಷ್ಪರಿಣಾಮ ಬೀರು ತ್ತಿತ್ತು. ಈ ಮಧ್ಯೆ ಕಡಿದಾಡ ರಸ್ತೆಯಲ್ಲಿ ಖಾಸಗಿ ವಾಹನ ಅಡ್ಡಾದಿಡ್ಡಿಯಾಗಿ ಚಲಿಸಿ ವಾಹನ ಮುಂದೆ ಸಾಗಿ ಕಷ್ಟವಾಗುತ್ತಿತ್ತು. ತಾಂತ್ರಿಕ ದೋಷ ಕಾಣಿಸಿಕೊಂಡು ಅಲ್ಲಲ್ಲಿ ಖಾಸಗಿ ವಾಹನಗಳು ಕೆಟ್ಟು ನಿಲ್ಲುವುದು ಸಾಮಾನ್ಯ ವಾ ಗಿತ್ತು. ಇದರಿಂದ ಪ್ರಯಾಣಿಕರು ಜೀವ ಭಯದಲ್ಲಿ ಪ್ರಯಾಣ ಮಾಡಬೇಕಿತ್ತು. ಇದನ್ನು ಮನಗಂಡ ಅರಣ್ಯ ಇಲಾಖೆ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲೇಶ್‌ರ ಅವಧಿಯಲ್ಲಿ 2015ರ ಅಕ್ಟೋಬರ್‌ನಲ್ಲಿ ಬೆಟ್ಟಕ್ಕೆ ಖಾಸಗಿ ವಾಹನ ನಿರ್ಬಂಧಿಸಿ, ಕೇವಲ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಟ್ಟಿತ್ತು.

ಹಿಮದ ರಾಶಿ ಹೊದ್ದು ಮಲಗಿದ ಬೆಟ್ಟ :

Advertisement

ವರ್ಷದ 360 ದಿನವೂ ಗೋಪಾಲಸ್ವಾಮಿ ಬೆಟ್ಟದ ಮೇಲೆ ಹಿಮದ ರಾಶಿ ಹೊದ್ದು ಮಲಗಿರುವ ಕಾರಣ ಪ್ರವಾಸಿಗರ ಸಂಖ್ಯೆ ದಿನ ಕಳೆಯುತ್ತಿದ್ದಂತೆ ಅಧಿಕವಾಗಿದೆ. ಹಿಮದ ರಾಶಿ ದೇವಸ್ಥಾನ ಸುತ್ತಮುತ್ತ ಹಾದು ಹೋಗುವುದು ಮುದ ನೀಡುತ್ತದೆ. ಎಂಥದೇ ಬೇಸಿಗೆ ಇದ್ದರೂ ಬೆಟ್ಟದ ಮೇಲೆ ತಣ್ಣನೆ ವಾತಾವರಣ ಇರುತ್ತದೆ. ಅರಣ್ಯ ಇಲಾಖೆ ವತಿಯಿಂದ ಬೆಟ್ಟಕ್ಕೆ ತೆರಳುವ ಭಕ್ತರು ಹಾಗೂ ಪ್ರವಾಸಿಗರ ಬ್ಯಾಗುಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಈ ವೇಳೆ ಪ್ಲಾಸ್ಟಿಕ್‌ ಕಂಡು ಬಂದರೆ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಈ ಮಧ್ಯೆ ಹೂವು, ಹಣ್ಣು, ಕಾಯಿ ಮತ್ತು ಊದುಕಡ್ಡಿ ಯಂತಹ ದೇವರ ಪೂಜೆಗೆ ಬಳಸುವ ಸಾಮಗ್ರಿ ಮಾತ್ರ ತೆಗೆದುಕೊಂಡು ಹೋಗಬಹುದಾಗಿದೆ. ಅಲ್ಲದೇ ಬೆಟ್ಟದಲ್ಲಿ ಪ್ರವಾಸಿಗರು ಒಂದು ಗಂಟೆ ಕಾಲ ಮಾತ್ರ ಇರಲು ಅವಕಾಶ ನೀಡಲಾಗಿದೆ.

ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರತಿನಿತ್ಯ ನೂರಾರು ವಾಹನಗಳಲ್ಲಿ ಸಾವಿರಾರು ಮಂದಿ ಸಂಚಾರ ಮಾಡುತ್ತಿದ್ದು, ತಪ್ಪಲಿನಲ್ಲಿ ಪಾರ್ಕಿಂಗ್‌ಗೆ  ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಬೆಟ್ಟಕ್ಕೆ ಖಾಸಗಿ ವಾಹನ ನಿರ್ಬಂಧ ಕುರಿತು ಸಾರ್ವಜನಿಕರಿಗೆ ಅರಿವಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ನಾಮಫ‌ಲಕ ಅಳವಡಿಸಿ ಅರಿವು ಮೂಡಿಸಬೇಕಿದೆ. -ಸಿ.ಮಂಜುನಾಯಕ್‌, ಪರಿಸರವಾದಿ

ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನ ನಿಷೇಧ ಕುರಿತು ನಾಮಫ‌ಲಕ ಹಾಕಲು ಕ್ರಮ ವಹಿಸಲಾಗುವುದು. ಜತೆಗೆ ಪ್ಲಾಸ್ಟಿಕ್‌ ನಿಷೇಧ ಸೇರಿ ಪರಿಸರದ ಕುರಿತು ಪ್ರವಾಸಿಗರಿಗೆ ಅರಿವು ಮೂಡಿಸಲಾಗುವುದು.-ಡಾ.ಪಿ.ರಮೇಶ್‌ ಕುಮಾರ್‌, ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ ಹುಲಿ ರಕ್ಷಿತ ಪ್ರದೇಶ.

ಬೆಟ್ಟಕ್ಕೆ ಖಾಸಗಿ ವಾಹನ ನಿಷೇಧದಿಂದ ಕೆಎಸ್‌ಆರ್‌ಟಿಸಿ ಬಸ್‌ ಗಳಲ್ಲಿ ಸುಗಮವಾಗಿ ಸಂಚಾರ ಮಾಡಬಹುದಾಗಿದೆ. ವರ್ಷದಲ್ಲಿ 5-6 ಬಾರಿ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸುವ ಜತೆಗೆ ಹಿಮದ ರಾಶಿಯನ್ನು ಕಣ್ತುಂಬಿಕೊಳ್ಳುತ್ತೇವೆ.-ಮುತ್ತುರಾಜು, ಪ್ರವಾಸಿಗ

– ಬಸವರಾಜು ಎಸ್‌.ಹಂಗಳ

 

Advertisement

Udayavani is now on Telegram. Click here to join our channel and stay updated with the latest news.

Next