ಮೂಲಕ ರೈತರ ಉತ್ಪನ್ನಗಳು ನೇರವಾಗಿ ಗ್ರಾಹಕರ ಕೈಗೆಟುಕಲಿವೆ.
Advertisement
ಉತ್ಪಾದನಾ ಪ್ರಮಾಣ ಹೆಚ್ಚಳ ಹಾಗೂ ಮಾರುಕಟ್ಟೆಯಲ್ಲಾಗುವ ಏರಿಳಿತಗಳನ್ನು ತಗ್ಗಿಸಿ, ರೈತರಿಗೆ ಹೆಚ್ಚು ಆದಾಯ ತಂದುಕೊಡುವ ನಿಟ್ಟಿನಲ್ಲಿ ಸಮಗ್ರ ಕೃಷಿಯಲ್ಲಿ ರೈತರ ಗುಂಪುಗಳನ್ನು ರಚಿಸಲು ಕೃಷಿ ಇಲಾಖೆ ಉದ್ದೇಶಿಸಿದೆ. ಈ ವರ್ಷ ಸುಮಾರು 50 ರೈತರ ಗುಂಪುಗಳನ್ನು ರಚಿಸುವ ಗುರಿಯಿದೆ. ಅವುಗಳನ್ನು ಕಂಪೆನಿಗಳೊಂದಿಗೆ ಲಿಂಕ್ ಮಾಡಲಾಗುವುದು.
ಕಾರ್ಯಾಗಾರದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಈ ಯೋಜನೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, “ರಾಜ್ಯದಲ್ಲಿರುವ ಸಣ್ಣ ಹಿಡುವಳಿದಾರರು ಕೃಷಿಯಲ್ಲಿ ಸುಧಾರಿತ ಕ್ರಮ ಅನುಸರಿಸಲು ಸಾಧ್ಯವಾಗು
ತ್ತಿಲ್ಲ. ಬೆಳೆ ಕೈಗೆ ಬಂದಾಗ ಮಾರುಕಟ್ಟೆಯಲ್ಲಿ ಅದಕ್ಕೆ ಬೆಲೆ ಇರು ವುದಿಲ್ಲ. ಒಂದೆರಡು ತಿಂಗಳು ದಾಸ್ತಾನು ಮಾಡಿ ಕೊಳ್ಳಲು ಗೋದಾಮು ವ್ಯವಸ್ಥೆ ಇರುವುದಿಲ್ಲ. ಇಂತಹ ಹಲವು ಸಮಸ್ಯೆಗಳಿಂದ ರೈತರಿಗೆ ಲಾಭಾಂಶ ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ರೈತರ ಸಂಘಟನೆ ಮೂಲಕ ಪರಿಹಾರ ದೊರೆಯಲಿದೆ. ಈ ವರ್ಷ ಇಂತಹ ಸುಮಾರು 50 ರೈತರ ಸಂಘಟನೆ ಅಥವಾ ಗುಂಪುಗಳನ್ನು ರಚಿಸುವ ಗುರಿ ಇದೆ’ ಎಂದು ಹೇಳಿದರು.
Related Articles
Advertisement