Advertisement

ಖಾಸಗಿ ಆಸ್ಪತ್ರೆ ಮೇಲ್ಛಾವಣಿ ಕುಸಿತ; ಓರ್ವ ಕಾರ್ಮಿಕ ಸಾವು

11:57 PM May 31, 2022 | Team Udayavani |

ಬೆಂಗಳೂರು: ನೃಪತುಂಗ ರಸ್ತೆಯಲ್ಲಿರುವ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಯ ಮುಂಭಾಗ ನಿರ್ಮಿಸುತ್ತಿದ್ದ ಮೇಲ್ಛಾವಣಿ ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

Advertisement

ರಾಯಚೂರು ಮೂಲದ ಬಸವರಾಜು (38) ಮೃತ ಕಾರ್ಮಿಕ. ಮೊಹಮ್ಮದ್‌ ರಫಿಸಾಬ್‌ (32), ಮೊಯಿದ್ದಿನ್‌ (34) ಮತ್ತು ಚಾಂದ್‌ಪಾಷಾ (37) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರ್ಘ‌ಟನೆ ಸಂಬಂಧ ನಿರ್ಲಕ್ಷ್ಯವಹಿಸಿದ್ದ ನಿರ್ಮಾಣದ ಗುತ್ತಿಗೆ ಪಡೆದಿದ್ದ ಕಂಪೆನಿ ಹಾಗೂ ಎಂಜಿನಿಯರ್‌ ಜೋನೆಟ್‌ ಜಾನ್‌ ವಿರುದ್ಧ ಹಲಸೂರು ಗೇಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಟ್ಟಡದ ಮೇಲ್ಭಾಗದಲ್ಲಿದ್ದ ನಾಲ್ವರು ಕೆಳಗೆ ಬಿದ್ದು ಕುಸಿದು ಬಿದ್ದಿದ್ದ ಅವಶೇಷಗಳಡಿ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಸಿಬಂದಿ ವಿವಿಧ ಯಂತ್ರೋಪಕರಣಗಳ ಮೂಲಕ ಕಬ್ಬಿಣದ ಸರಳುಗಳನ್ನು ಕತ್ತರಿಸಿ ಅವಶೇಷಗಳಡಿ ಸಿಲುಕಿದ್ದ ಬಸವರಾಜು, ಮೊಯಿದ್ದಿನ್‌, ಮೊಹಮ್ಮದ್‌ ರಫಿ, ಚಾಂದ್‌ಪಾಷಾ ಅವರನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next