Advertisement

ಸೀಮಿತ ಸಂಖ್ಯೆಯಲ್ಲಿ ಖಾಸಗಿ ಬಸ್‌ ಸಂಚಾರ

08:41 PM Jul 01, 2021 | Team Udayavani |

ಉಡುಪಿ: ಜಿಲ್ಲಾದ್ಯಂತ ಗುರುವಾರದಿಂದ ಖಾಸಗಿ ಬಸ್‌ಗಳು ಸೀಮಿತ ಸಂಖ್ಯೆಯಲ್ಲಿ ಪ್ರಯಾಣ ಮಾಡಿದವು. ಮೊದಲ ದಿನವಾದ ಕಾರಣ ಪ್ರಯಾಣಿಕರ ಕೊರತೆ ಕಂಡುಬಂತು.

Advertisement

ಬಸ್‌ಗಳಲ್ಲಿ ಕೋವಿಡ್‌ ನಿಯಮಾವಳಿಗಳನ್ನೆಲ್ಲ ಪಾಲಿಸಲಾಗಿತ್ತು. ಆದರೆ ಟಿಕೆಟ್‌ ದರದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಈ ಹಿಂದಿನಂತೆಯೇ ದರವನ್ನು ನಿಗದಿಪಡಿಸಲಾಗಿತ್ತು.

ಬಸ್‌ ಸಂಚರಿಸಿದ ಮಾರ್ಗಗಳು:

ಮಲ್ಪೆ, ತೊಟ್ಟಂ, ಹೂಡೆ ಭಾಗಗಳಿಗೆ 4, ಕೆಮ್ಮಣ್ಣು-ಹೂಡೆ ಭಾಗಕ್ಕೆ 2, ಮಣಿಪಾಲ, ಆತ್ರಾಡಿ, ಪರ್ಕಳ ಭಾಗಕ್ಕೆ 2, ಅಲೆವೂರು-ಮೂಡುಬೆಳ್ಳೆ ಮಾರ್ಗಕ್ಕೆ 1 ಸಿಟಿ ಬಸ್‌ಗಳು ಸಂಚರಿಸಿದವು. ಮಣಿಪಾಲ- ಉಡುಪಿ- ಮಂಗಳೂರು-ಕುಂದಾಪುರ-ಹೆಬ್ರಿ ಭಾಗಗಳಿಗೆ ಒಟ್ಟು 23 ಎಕ್ಸ್‌ಪ್ರೆಸ್‌ ಬಸ್‌ಗಳು ಸಂಚರಿಸಿದವು. ಹಾಗೆಯೇ ಕಾಪು- ಪಡುಬಿದ್ರಿ- ಮೂಲ್ಕಿ- ಶಂಕರಪುರ- ಮಂಚಕಲ್‌- ಕಾರ್ಕಳ ಭಾಗಗಳಿಗೆ ಉಡುಪಿಯಿಂದ 5 ಬಸ್‌ಗಳು ಸಂಚರಿಸಿದವು.

ಪ್ರಯಾಣಿಕರು ಕಡಿಮೆ:

Advertisement

ಗುರುವಾರದಿಂದ ಬಸ್‌ ಸಂಚಾರ ಆರಂಭಗೊಂಡರೂ ಪ್ರಯಾಣಿಕರ ಸಂಖ್ಯೆ ವಿರ ಳವಾಗಿತ್ತು. ಬೆಳಗ್ಗೆ ಹಾಗೂ ಸಂಜೆ ವೇಳೆ ಬಿಟ್ಟರೆ ಉಳಿದಂತೆ ಬಸ್‌ಗಳಲ್ಲಿ ಪ್ರಯಾಣಿಕರೇ ಇರಲಿಲ್ಲ. ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಹಂತ-ಹಂತವಾಗಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ವಾಹನ ಮಾಲಕರದ್ದು.

ಶನಿವಾರ, ರವಿವಾರ ಬಸ್‌ ಓಡಾಟ ಅನುಮಾನ :

ಜಿಲ್ಲಾದ್ಯಂತ ಜು.5ರ ವರೆಗೆ ಲಾಕ್‌ಡೌನ್‌, ರಾತ್ರಿ ಕರ್ಫ್ಯೂ ಇರುವುದರಿಂದ ಶನಿವಾರ ಹಾಗೂ ರವಿವಾರ ಜನರ ಓಡಾಟ ಕಡಿಮೆ ಇರುತ್ತದೆ. ಈ ದಿನದಂದು ಬಸ್‌ಗಳನ್ನು ಓಡಿಸುವ ಬಗ್ಗೆ ಮಾಲಕರು ಇದುವರೆಗೂ ತೀರ್ಮಾನಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸಲಾಗುವುದು ಎಂದು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next