Advertisement

ಬೈಂದೂರಿನಲ್ಲಿ ಪೃಥ್ವಿರಾಜ್‌ ಚವ್ಹಾಣ್‌ ರೋಡ್‌ ಶೋ

12:01 AM May 07, 2023 | Team Udayavani |

ಕುಂದಾಪುರ : ಬೈಂದೂರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಪರ ಶನಿವಾರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌವ್ಹಾಣ್‌ ರೋಡ್‌ ಶೋ ನಡೆಸಿ, ಪ್ರಚಾರ ಸಭೆಯಲ್ಲೂ ಭಾಗಿಯಾದರು.

Advertisement

ದೊಂಬೆಯಿಂದ ಆರಂಭಗೊಂಡ ರೋಡ್‌ ಶೋ ಶಿರೂರು, ಅಳ್ವಗದ್ದೆ, ಬೈಂದೂರು ಪೇಟೆ, ಉಪ್ಪುಂದ, ಕಂಚಿಕಾನ್‌, ಹೊಸ್ಕೋಟೆ ಮೂಲಕವಾಗಿ ಕಾಲೊ¤àಡಿಗೆ ಸಾಗಿ ಸಮಾಪ್ತಿಗೊಂಡಿತು.

ಅಲ್ಲಿಯೇ ನಡೆದ ಸಮಾವೇಶದಲ್ಲಿ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ದುರಾಡಳಿತದ ಬಗ್ಗೆ ಜನ ಬೇಸತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದ ಜನ ಬೈಂದೂರು ಸೇರಿದಂತೆ ಎಲ್ಲೆಡೆ ಕಾಂಗ್ರೆಸ್‌ ಅನ್ನು ಬೆಂಬಲಿಸಲಿದ್ದಾರೆ. ಗೋಪಾಲ ಪೂಜಾರಿ ಈ ಬಾರಿ ಜಯ ಸಾಧಿಸುವ ವಿಶ್ವಾಸವಿದೆ ಎಂದರು.

ಬೈಂದೂರು ಕಾಂಗ್ರೆಸ್‌ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ, ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮದನ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next