Advertisement

ಕೈದಿಗಳು ಜೈಲಿನಿಂದ ಪರಾರಿಗೆ ಸಂಚು: ಅಧೀಕ್ಷಕರಿಂದ ಠಾಣೆಗೆ ದೂರು

10:43 PM Aug 21, 2019 | Team Udayavani |

ಬಳ್ಳಾರಿ: ನಗರದ ಕೇಂದ್ರ ಕಾರಾಗೃಹದಿಂದ ಪರಾರಿಯಾಗಲು ಸಂಚು ರೂಪಿಸುತ್ತಿರುವ ಬಗ್ಗೆ ಗುಮಾನಿ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರಾಗೃಹದ ಕೈದಿಗಳ ಗುಂಪೊಂದನ್ನು ಬೇರೆ ಕಾರಾಗೃಹಕ್ಕೆ ಸ್ಥಳಾಂತರಿಸುವ ಸಲುವಾಗಿ ಜೈಲು ಅಧೀಕ್ಷಕರು ಇಲ್ಲಿನ ಗಾಂಧಿನಗರ ಠಾಣೆಯಲ್ಲಿ‌ ಬುಧವಾರ ಸಂಜೆ ದೂರು ನೀಡಿದ್ದಾರೆ.

Advertisement

ಕಾರಾಗೃಹದಲ್ಲಿರುವ ಕೈದಿಗಳ ಗುಂಪೊಂದು ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಹಿನ್ನೆಲೆಯಲ್ಲಿ ಜೈಲಿನಿಂದ ಪರಾರಿಯಾಗಲು ಯತ್ನಿಸುತ್ತಿದೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು‌ಮಾಡಲಾಗಿದ್ದು, ಜೈಲಿಗೆ ಬಿಗಿ ಭದ್ರತೆ ಒದಗಿಸಿದ್ದರೂ, ಕೈದಿಗಳ ಗುಂಪಿನ ಮೇಲೆ ‌ಅನುಮಾನ ಬಂದಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜೈಲಿನ ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆಯೂ ಕೈದಿಯೊಬ್ಬರು ಹಗ್ಗದ ಸಹಾಯದಿಂದ ಗೋಡೆ ಹಾರಿ‌ ಪರಾರಿಯಾಗಿದ್ದರು. ಈ ಘಟನೆ ಬಳಿಕ ಗೋಡೆಯನ್ನು ಮತ್ತಷ್ಟು ಎತ್ತರಿಸಲಾಗಿತ್ತಲ್ಲದೆ, ವಿದ್ಯುತ್ ತಂತಿಯನ್ನು ಜೈಲಿನ ಗೋಡೆಯ ಸುತ್ತ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next