Advertisement

ಕಾರಾಗೃಹದಲ್ಲಿ ಮರದ ಮೇಲಿಂದ ಬಿದ್ದ ಅತ್ಯಾಚಾರ ಆರೋಪಿ ಕೈದಿ ಸಾವು

10:08 AM Jan 27, 2020 | keerthan |

ಧಾರವಾಡ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಮರವೇರಿದ್ದ ಕೈದಿಯೊಬ್ಬ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.

Advertisement

ಚೇತನ್ ಕುಮಾರ್ ಅಲಿಯಾಸ್ ಮೇಕೆ (28) ಮರದಿಂದ ಬಿದ್ದು ಕೆಳಗೆ ಬಿದ್ದು ಸಾವನ್ನಪ್ಪಿದ ಕೈದಿ.

ಬಳ್ಳಾರಿ ಜೈಲಿನಲ್ಲಿದ್ದ ಈತ ಇತ್ತೀಚೆಗಷ್ಟೇ ಧಾರವಾಡ ಜೈಲಿಗೆ ವರ್ಗವಾಗಿದ್ದ. ಆದರೆ ಆತ ಯಾವುದೋ ಕಾರಣಕ್ಕೆ ಕಾರಾಗೃಹದೊಳಗಿದ್ದ ಮರವೇರಿ ಪ್ರತಿಭಟನೆ ಮಾಡಿದ್ದ ಎಂದು ವರದಿಯಾಗಿದೆ. ಈತ ಈ ಹಿಂದೆಯೂ ಮರವೇರಿ ಪ್ರತಿಭಟನೆ ನಡೆಸುತ್ತಿದ್ದ ಎನ್ನಲಾಗಿದೆ. ಆದರೆ ಇಂದು ಮರವೇರಿದ್ದ ಆತ ಆಯತಪ್ಪಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಅತ್ಯಾಚಾರದ ಆರೋಪ ಎದುರಿಸುತ್ತಿದ್ದ ಚೇತನ್ ಕುಮಾರ್ ಅಲಿಯಾಸ್ ಮೇಕೆ ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದ ನಿವಾಸಿಯಾಗಿದ್ದಾನೆ.  ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪದಲ್ಲಿ 2015ರಲ್ಲಿ ಬಂಧಿತನಾಗಿದ್ದ.

ಜಿಲ್ಲಾ ನ್ಯಾಯಾಲಯದಲ್ಲಿ ಚೇತನ್ ಕುಮಾರ್ ಗೆ 10 ವರ್ಷ ಶಿಕ್ಷೆಯಾಗಿತ್ತು. ಈ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ.

Advertisement
Advertisement

Udayavani is now on Telegram. Click here to join our channel and stay updated with the latest news.

Next