Advertisement

ಅಕ್ರಮ ಚಿನ್ನ ಸಾಗಾಟ ಆರೋಪಿ ಸೆರೆ

11:22 AM Aug 17, 2018 | Team Udayavani |

ಬೆಂಗಳೂರು: ಬ್ಯಾಂಕಾಕ್‌ನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಸೀಮಾ ಸುಂಕ ವಿಭಾಗದ ಅಧಿಕಾರಿಗಳು ಬಂಧಿಸಿದ್ದು, 80 ಲಕ್ಷ ರೂ. ಮೌಲ್ಯದ 2.6 ಕೆ.ಜಿ ತೂಕದ 3 ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಬೆಂಗಳೂರು ಮೂಲದ ಎ.ಮೊಹಮ್ಮದ್‌ (52) ಬಂಧಿತ. ಆರೋಪಿ ಆ.14ರಂದು ಬ್ಯಾಂಕಾಕ್‌ನಿಂದ ಏರ್‌ ಏಷಿಯಾ ವಿಮಾನದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಈತನ ವರ್ತನೆಯಿಂದ ಅನುಮಾನಗೊಂಡು ತಪಾಸಣೆ ನಡೆಸಿದಾಗ ಬ್ಯಾಗ್‌ನ ಅಡಿಯಲ್ಲಿ ಲೋಹ ಇರುವುದು ಕಂಡು ಬಂದಿದೆ.

ಬಳಿಕ ಬ್ಯಾಗ್‌ನ ತಳಭಾಗವನ್ನು ಕತ್ತರಿಸಿದಾಗ ಚಿನ್ನದ ಬಿಸ್ಕತ್‌ಗಳನ್ನು ಕಪ್ಪು ಇನ್ಸುಲೇನ್‌ ಟೇಪ್‌ನಿಂದ ಸುತ್ತಿ ಅವುಗಳನ್ನು ಚರ್ಮದ ಬ್ಯಾಗ್‌ನ ತಳಭಾಘದಲ್ಲಿ  ಇಟ್ಟು, ಹೊಲಿಗೆ ಹಾಕಿರುವುದು ಕಂಡು ಬಂದಿದೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next