Advertisement

Moodbidri: 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

11:55 PM Aug 22, 2024 | Team Udayavani |

ಮೂಡುಬಿದಿರೆ: ಇಪ್ಪತ್ತೂಂಬತ್ತು ವರ್ಷಗಳ ಹಿಂದೆ ಒಂಟಿಕಟ್ಟೆಯಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ, ಒಂಟಿಕಟ್ಟೆಯ ಹರೀಶ್‌ ಪೂಜಾರಿ (55)ಯನ್ನು ಮೂಡುಬಿದಿರೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಯು ಇತರ ಆರೋಪಿಗಳಾದ ಭೋಜ ಕೋಟ್ಯಾನ್‌, ಹರೀಶ್‌ ಪೂಜಾರಿ, ಜಗದೀಶ್‌ ಸಾಲ್ಯಾನ್‌, ಪ್ರಕಾಶ್‌, ರಾಜಣ್ಣ ಹಾಗೂ ಸಂಗಲೇ ಮುರುಗನ್‌ ಜತೆ ಸೇರಿಕೊಂಡು 1995ರಲ್ಲಿ ಒಂಟಿಕಟ್ಟೆಯ ಮನೆಯೊಂದರ ಗಾರೆ ಕೆಲಸ ಮಾಡುತ್ತಿದ್ದ ಸತೀಶ್‌ ಪೂಜಾರಿ ಮತ್ತು ಇತರರಿಗೆ ಮರದ ದೊಣ್ಣೆಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದ ಬಗ್ಗೆ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿಗಳ ಪೈಕಿ ಹರೀಶ್‌ ಪೂಜಾರಿ ಮಾತ್ರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.

ಆತ ಕೋಟೆಬಾಗಿಲಿನಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅತನನ್ನು ಅಲ್ಲಿಂದಲೇ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next