Advertisement

ದಲಿತ ಅಸ್ಪೃಶ್ಯರಿಗೆ ಆದ್ಯತೆ: ಪರಮೇಶ್ವರಪ್ಪ

05:23 PM May 07, 2018 | |

ಹಗರಿಬೊಮ್ಮನಹಳ್ಳಿ: ಕಳೆದ ಎರಡು ಅವಧಿಯ ಆಡಳಿತದಿಂದ ಬೇಸತ್ತ ಜನರು ಈ ಬಾರಿ ಶೋಷಿತ ಸಮುದಾಯಕ್ಕೆ ಆದ್ಯತೆ ನೀಡುವ ಮೂಲಕ ಬೆಂಬಲಿಸುವರು ಎಂದು ಪಕ್ಷೇತರ ಅಭ್ಯರ್ಥಿ ಪರಮೇಶ್ವರಪ್ಪ ತಿಳಿಸಿದರು.

Advertisement

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಪಾರ ಬೆಂಬಗಲಿಗರೊಂದಿಗೆ ಬೈಕ್‌ರ್ಯಾಲಿ ನಡೆಸಿ ಮಾತನಾಡಿದ ಅವರು, ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದರೂ ಕೇವಲ ಒಂದು ಸಮುದಾಯಕ್ಕೆ ಸೌಲಭ್ಯಗಳನ್ನು ಒದಗಿಸುವ ಮಾಜಿ ಶಾಸಕರು ದಲಿತ ಅಸ್ಪೃಶ್ಯರನ್ನು ಕಡೆಗಣಿಸಿದ್ದಾರೆ. ಆದ್ದರಿಂದ ಈ ಬಾರಿ ಅಸ್ಪೃಶ್ಯ ದಲಿತರಿಗೆ ಕ್ಷೇತ್ರದ ಸೇವೆಯನ್ನು ಮಾಡಲು ಅವಕಾಶ ನೀಡಬೇಕು. ಸಾಮಾಜಿಕ ನ್ಯಾಯಕ್ಕೆ ಬೆಲೆ ನೀಡದ ಪಕ್ಷಗಳಿಗೆ ಪಾಠ ಕಲಿಸುವ ದಿನಗಳು ಹತ್ತಿರವಾಗುತ್ತಿವೆ.
 
ಪ್ರಜ್ಞಾವಂತ ಮತದಾರರು ಆಟೋ ಗುರುತಿಗೆ ಮತ ಚಲಾಯಿಸುವ ಮೂಲಕ ಬೆಂಬಲಿಸಬೇಕೆಂದು ಮನವಿ ಮಾಡಿದರು. ಮುಖಂಡರಾದ ಬಲ್ಲಾಹುಣಿ ರಾಮಣ್ಣ, ಜೆ.ಯೋಗಾನಂದ ಮಾತನಾಡಿದರು. ಮುಖಂಡರಾದ ಎಲಿಗಾರ ರವಿ, ಸಂಪತ್‌ ಕುಮಾರ ನಾಯ್ಕ, ದುರುಗಪ್ಪ, ಮರಿಯಪ್ಪ, ಚಾರೆಪ್ಪ, ದಾದಾ ಕಲಂದರ್‌, ಎಣ್ಣಿ ಭಾಷ, ಆನಂದ, ವಿರೇಶ್‌, ಕರಿಯಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next