Advertisement

Alur: ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ದಲಿತರಿಗೆ ಸವರ್ಣೀಯರಿಂದ ತಡೆ

11:17 PM Feb 28, 2024 | Team Udayavani |

ಆಲೂರು: ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ದಲಿತ ಮಹಿಳೆಯರನ್ನು ತಡೆದ ಸವರ್ಣೀಯ ಮಹಿಳೆಯರ ತಂಡ, ಜಾತಿನಿಂದಿಸಿ ಹಲ್ಲೆ ನಡೆಸಲು ಮುಂದಾದ ಅಮಾನವೀಯ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಂತನಮನೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Advertisement

ಫೆ.27ರಂದು ದಲಿತ ಮಹಿಳೆಯರು ಎಂದಿನಂತೆ ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಸವರ್ಣೀಯ ಮಹಿಳೆಯರಾದ ಗ್ರಾಮದ ಮಣಿಯಮ್ಮ, ಹೊನ್ನಮ್ಮ, ರಾಧಮ್ಮ, ಗೌರಮ್ಮ, ಸುನಂದ, ಕಮಲಮ್ಮ ಮತ್ತಿತರರು ಆಕ್ಷೇಪಿಸಿದ್ದಾರೆ. “ಕೆರೆಯಲ್ಲಿ ದಲಿತರು ಬಟ್ಟೆ ತೊಳೆಯುವಂತಿಲ್ಲ. ಈ ಕರೆ ನಮಗೆ ಮೀಸಲಾಗಿದೆ’ ಎಂದು ಸೋಪಾನ ಕಟ್ಟೆಯ ಮೇಲಿದ್ದ ಬಟ್ಟೆಗಳನ್ನು ಎಸೆದಿದ್ದಾರೆ. ಪ್ರಶ್ನಿಸಿದ ದಲಿತ ಮಹಿಳೆಯರನ್ನು ಜಾತಿನಿಂದಿಸಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ. ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಬಳಿಕ ದಲಿತ ಮಹಿಳೆಯರು ತಮ್ಮ ಮುಖಂಡರ ಸಹಾಯದಿಂದ ಆಲೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next