Advertisement

Drought: ಬರ ನಿರ್ವಹಣೆಗೆ ಆದ್ಯತೆ: ಡಾ| ಜಿ. ಪರಮೇಶ್ವರ್‌

12:06 AM Nov 22, 2023 | Team Udayavani |

ವಿಜಯಪುರ: ರಾಜಕೀಯ ವ್ಯವಸ್ಥೆಯಲ್ಲಿ ಬೆಂಬಲಿಗರಿಗೆ ತಮ್ಮ ನಾಯಕ ಉನ್ನತ ಸ್ಥಾನಕ್ಕೆ ಹೋಗಬೇಕೆಂಬ ಭಾವನೆ ಇರುತ್ತದೆ. ನಮ್ಮ ಪಕ್ಷದಲ್ಲಿ ಸಾಂದರ್ಭಿಕವಾಗಿ ಹೈಕಮಾಂಡ್‌ ಕೈಗೊಳ್ಳುವ ನಿರ್ಧಾರವೇ ಬೇರೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸವದತ್ತಿ ಶಾಸಕ ವೈದ್ಯ ಅವರು ಸತೀಶ ಜಾರಕಿಹೊಳಿ ಸಿಎಂ ಆಗಬೇಕೆಂದು ನೀಡಿರುವ ಹೇಳಿದ್ದಾರೆ. ರಾಜಕೀಯದಲ್ಲಿ ನಮ್ಮ ಬೆಂಬಲಿಗರಿಗೆ ರಾಜಕೀಯ ದಲ್ಲಿ ನಮ್ಮ ನಾಯಕ ಶಾಸಕ, ಸಂಸದ, ಸಚಿವ, ಡಿಸಿಎಂ, ಸಿಎಂ ಆಗಬೇಕು ಎಂದೆಲ್ಲ ಆಸೆ ಇರಿಸಿಕೊಂಡಿರುತ್ತಾರೆ. ಅವರ ಭಾವನೆಗಳನ್ನು ತಡೆಯಲು ಆಗದು. ಆದರೆ ರಾಜಕೀಯದಲ್ಲಿ ವಾಸ್ತವಿಕ ವ್ಯವಸ್ಥೆಯೇ ಬೇರೆ ಇರುತ್ತದೆ. ಕಾಂಗ್ರೆಸ್‌ ಪಕ್ಷದಲ್ಲಿ ಹೈಕಮಾಂಡ್‌ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದರು. ರಾಜ್ಯದಲ್ಲಿ ಪ್ರಸ್ತುತ ಭೀಕರ ಬರ ಆವರಿಸಿದೆ.

ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಕುರಿತು ನಮ್ಮ ಆದ್ಯತೆ ಇದೆಯೇ ಹೊರತು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸ್ಥಾನಗಳ ಹೆಚ್ಚಳದ ಕುರಿತು ಅಲ್ಲ. ಭವಿಷ್ಯದಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಾಗುತ್ತಿದೆ. ಇಂತಹ ಸಮಸ್ಯೆಗಳಿರುವಾಗ ಬೇರೆ ಯೋಚನೆಗಳಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next