Advertisement

ಪ್ರಧಾನಿ ಮೋದಿ ಹತ್ಯೆ ಸಂಚು: ತನಿಖೆಗೆ ಆಗ್ರಹ

11:59 AM Jun 10, 2018 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚಿನ ಸುದ್ದಿಯ ವಿಶ್ವಾಸರ್ಹತೆಯಲ್ಲಿ ಅನುಮಾನ ಕಾಡುತ್ತಿದ್ದು, ಸತ್ಯಾಂಶತೆ ಹೊರಬರಲು ತನಿಖೆ ನಡೆಸಬೇಕು ಎಂದು ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆಯ ಸಂಚಾಲಕ ಎ.ಕೆ.ಸುಬ್ಬಯ್ಯ ಆಗ್ರಹಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಪ್ರಧಾನಿ ಅವರ ಕೊಲೆಯತ್ನದ ಪ್ರಯತ್ನ ನಡೆದಿದ್ದರೆ ಅದು ಖಂಡನೀಯ.ಆದರೆ, ಈ ವಿಚಾರದಲ್ಲಿ ಅನುಮಾನ ಕಾಡುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ಪಡೆಯುವ ಉದ್ದೇಶವು ಕೂಡ ಇದರಲ್ಲಿ ಅಡಗಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಯುತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮಿಶ್ರ ಸರ್ಕಾರ ರಚನೆ ಆಗಿರುವುದು ಸ್ವಾಗತಾರ್ಹ.ಆದರೆ ಸಚಿವ ಸ್ಥಾನಕ್ಕಾಗಿ ಕಿತ್ತಾಟ ನಡೆಸುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next