Advertisement

ಸಂತ ಕಬೀರ್‌ ಸಮಾಧಿ ಸ್ಥಳದಿಂದ ಪ್ರಧಾನಿ ಮೋದಿ ಪ್ರಚಾರ ಆರಂಭ?

11:18 AM Jun 27, 2018 | |

ಮಘರ್‌ (ಉ.ಪ್ರ): ಹಿಂದಿನ ಲೋಕ ಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ವಾರಾಣಸಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 2019ರ ಮಹಾ ಚುನಾವಣೆಗಾಗಿ ಪ್ರಧಾನಿ ಮೋದಿಯ ವರು ಉತ್ತರ ಪ್ರದೇಶದ ಸಂತ ಕಬೀರ್‌ ನಗರ್‌ ಜಿಲ್ಲೆಯಲ್ಲಿರುವ ಮಘರ್‌ ಎಂಬಲ್ಲಿಂದ ಪ್ರಚಾರ ಆರಂಭಿಸುವ ಸಾಧ್ಯತೆಗಳಿವೆ. 

Advertisement

ಕಬೀರ್‌ ಇದ್ದ 15ನೇ ಶತಮಾನದಲ್ಲಿ “ಮೋಕ್ಷಕ್ಕಾಗಿ ಕಾಶಿ (ವಾರಾಣಸಿ)ಗೆ ತೆರಳಬೇಕು. ಸಾಯಬೇಕಾಗಿದ್ದರೆ ಮಘರ್‌ಗೆ ತೆರಳಬೇಕು’ ಎಂಬ ಜನಜನಿತ ಮಾತುಗಳಿದ್ದವು. ಅದನ್ನು ಸುಳ್ಳು ಮಾಡಲೆಂದೇ ಅವರು ಇಲ್ಲಿಗೆ ಬಂದು ಸಮಾಧಿ ಹೊಂದಿದರು ಎನ್ನುವುದು ಐತಿಹ್ಯ.

ಈ ಕ್ಷೇತ್ರದ ಸಂಸದರಾಗಿರುವ ಶರದ್‌ ತ್ರಿಪಾಠಿ ಮಾತನಾಡಿ, “ಗುರುವಾರ ಪ್ರಧಾನಿ ಮೋದಿಯವರು ಇಲ್ಲಿಗೆ ಆಗಮಿಸಲಿದ್ದಾರೆ. ಸಂತ ಕಬೀರ್‌ ಅವರ ಸಮಾಧಿಗೆ ತೆರಳಿ ಪ್ರಧಾನಿ ಗೌರವ ಅರ್ಪಿಸಿದ ಬಳಿಕ ಬೃಹತ್‌ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆ ದಿನ ಕಬೀರ್‌ ಅವರ 500ನೇ ಪುಣ್ಯ ತಿಥಿಯ ದಿನವೂ ಹೌದು. ಮೋದಿಯವರ ಸಬ್‌ ಕಾ ಸಾಥ್‌; ಸಬ್‌ ಕಾ ವಿಕಾಸ್‌ಗೆ ಧಾರ್ಮಿಕ ಸಂತನೇ ಪ್ರರೇಣೆ’ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next