Advertisement

ದೇಶದ ಕೀರ್ತಿ ಪತಾಕೆ ಹಾರಿಸಿದ ಪ್ರಧಾನಿ ಮೋದಿ

12:28 PM May 24, 2019 | Team Udayavani |

ಗೋಕಾಕ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆದ ಹಿನ್ನೆಲೆಯಲ್ಲಿ ಇಲ್ಲಿಯ ಶ್ರೀರಾಮ ಸೇನಾ, ಬಿಜೆಪಿ ನಗರ ಘಟಕ ಪದಾಧಿಕಾರಿಗಳು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Advertisement

ನಂತರ ಬಸ್‌ ನಿಲ್ದಾಣ ಮಾರ್ಗವಾಗಿ ಮೆರವಣಿಗೆ ಮೂಲಕ ಶ್ರೀ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಂತರ ಮಾತನಾಡಿದ ಬಿಜೆಪಿ ಮುಖಂಡ ಅಶೋಕ ಪೂಜಾರಿ, ಇಂದಿನ ಫಲಿತಾಂಶದಿಂದ ಭಾರತ ಕೀರ್ತಿ ಪತಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಹೆಚ್ಚಿದ್ದು, ನರೇಂದ್ರ ಮೋದಿ ಅವರ ನಾಯಕತ್ವವನ್ನು ದೇಶದ ಜನತೆ ಮನಪೂರ್ವಕವಾಗಿ ಒಪ್ಪಿ ಬೆಂಬಲಿಸಿದ್ದಾರೆ. ಸಮಗ್ರ ಭಾರತ ಅಭಿವೃದ್ಧಿ ಪಥದತ್ತ ಸಾಗಲಿದ್ದು, ಇದಕ್ಕೆ ಕಾರಣಿಭೂತರಾದ ಪ್ರಬುದ್ಧ ಮತದಾರರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್‌.ವಿ.ದೇಮಶೆಟ್ಟಿ, ಶ್ರೀರಾಮ ಸೇನೆಯ ಮುಖಂಡರಾದ ರಾಜು ಜಾಧವ, ಸುನೀಲ ಮುರ್ಕಿಭಾಂವಿ, ಡಾ| ರಮೇಶ ಪಟಗುಂದಿ, ಶ್ರೀದೇವಿ ತಡಕೋಡ ಮಾತನಾಡಿ, ಈ ವಿಜಯವನ್ನು ಇಡಿ ಜಗತ್ತೆ ನಿಬ್ಬೆರಗಾಗಿ ನೋಡುತ್ತಿದ್ದು, ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಇನ್ನು ಮುಂದಿನ 5 ವರ್ಷಗಳಲ್ಲಿ ನಮ್ಮ ದೇಶ ಅಭಿವೃದ್ಧಿ ಹೊಂದಿ ವಿಶ್ವ ಗುರುವಾಗಿ ಸಂಭ್ರಮಿಸಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಕುಸಮಾ ಖನಗಾಂವಿ, ಮಹಾಂತೇಶ ತಾಂವಶಿ, ಕೇದಾರಿ ಜಾಧವ, ಬಸು ಪಡತಾರೆ, ಅಮಿತ್‌ ವಣ್ಣೂರ, ಪ್ರಸಾದ ಬಡಿಗೇರ, ಕೃಷ್ಣಾ ಗುಡ್ಡದಮನಿ, ಸುನೀಲ ಸುಭಂಜಿ, ಶಿವು ಪೂಜೇರಿ, ಪ್ರೊ. ಬಿಕ್ಕನ್ನವರ, ದಸ್ತಗೀರ ಪೈಲವಾನ, ಸತೀಶ ಗೋಳಸಂಗಿ, ಸುನೀಲ ಘೋರ್ಪಡೆ, ಮಹೇಶ ಕರೋಶಿ, ವಿಶ್ವನಾಥ ಸುಣಧೋಳಿ, ಸಮೀರ ಸುಣಧೋಳಿ, ಲಕ್ಷ್ಮೀಕಾಂತ ದನದವರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next