Advertisement

ಮಹದಾಯಿ, ರೈತರ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಮೌನ

09:43 PM Feb 28, 2023 | Team Udayavani |

ರೋಣ: ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವಾಗ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. ಆದರೆ, ರೈತರ ಆದಾಯ ದ್ವಿಗುಣ ಮಾಡದೆ ಅದಾನಿ ಮತ್ತು ಅಂಬಾನಿ ಕಂಪನಿಗಳ ಆದಾಯ ದ್ವಿಗುಣ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

Advertisement

ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮೇಲಿಂದ ಮೇಲೆ ರೋಡ್‌ ಶೋ ಮಾಡುವ ಮೋದಿ ಒಂದು ದಿನವೂ ಮಹದಾಯಿ ಹಾಗೂ ರೈತರ ಯೋಜನೆಗಳ ಬಗ್ಗೆ ಮಾತನಾಡಲ್ಲ. ರಾಜ್ಯದ ಮತದಾರರು ಬಿಜೆಪಿ ನಾಯಕರಿಗೆ ನೀವು ಲಂಚಕೋರರು, ನಿಮಗೆ ಮತ ಹಾಕಲ್ಲಾ ಎನ್ನುತ್ತಾರೆ. ಅದಕ್ಕೆ ಮೇಲಿಂದ ಮೇಲೆ ಮೋದಿ ಅವರನ್ನು ಕರೆಸುತ್ತಾರೆ. ಹಾಗಾಗಿ, ನಾನು ಇವರನ್ನು ಅಲಿಬಾಬಾ ಮತ್ತು ಚಾಲಿಸ್‌ ಚೋರ್‌ ಎಂದು ಕರೆಯುತ್ತೇನೆ ಎಂದರು.

ರೋಣ ಎಂಎಲ್‌ಎ ಕಳಕಪ್ಪ ಬಂಡಿ 10 ಪರ್ಸೆಂಟ್‌ ತಗೋಳ್ತಾರೆ. ವರ್ಗಾವಣೆ, ಪೊಲೀಸ್‌ ನೇಮಕಾತಿಯಲ್ಲಿ ಲಂಚ ಹೊಡೆಯುತ್ತಾರೆ. ಇದನ್ನು ಅವರ ಪಕ್ಷದ ಯತ್ನಾಳ ಹಾಗೂ ಪ್ರತಾಪ್‌ ಸಿಂಹ ಅವರೇ ಹೇಳಿದ್ದಾರೆ.

ಪಾಪ ನಂದೀಶ್‌ ಎಂಬ ಪೊಲೀಸ್‌ ಆತ್ಮಹತ್ಯೆ ಮಾಡಿಕೊಂಡ. ಅವನನ್ನು ನೋಡಲು ಎಂಟಿಬಿ ನಾಗರಾಜ್‌ ಹೋಗಿದ್ದರು. ಆ ಗಿರಾಕಿ ನಮ್ಮ ಹತ್ತಿರ ಇದ್ದ. ಈಗ ಆಪರೇಷನ್‌ ಕಮಲದಲ್ಲಿ ವ್ಯಾಪಾರ ಆಗಿರುವ ಗಿರಾಕಿ. ಅವನೇ ಹೇಳ್ತಾನೆ. 80 ಲಕ್ಷ ಕೊಟ್ಟು ವರ್ಗಾವಣೆ ಮಾಡಿಸಿದ್ದ. ಸಾಯದೇ ಇನ್ನೇನು ಅಂತ. ಎಲ್ಲ ಹುದ್ದೆಗೆ ಲಂಚ ಲಂಚ ಎಂದು ವಿಧಾನಸಭೆಯ ಗೋಡೆಗಳ ಸಂದುಗಳು ಹೇಳುತ್ತವೆ. ಇಂತಹ ಪಕ್ಷ ಮತ್ತೆ ಅಧಿ ಕಾರಕ್ಕೆ ಬರಬೇಕಾ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next