Advertisement

ಪ್ರಕೃತಿ ಬಾಧೆಗಿಲ್ಲಿ ಮುಳ್ಳು ಕಂಟಿಯೇ ಆಧಾರ

10:20 AM Jan 11, 2018 | Team Udayavani |

ಜೇವರ್ಗಿ: ಸರ್ಕಾರ ನಗರಾಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೆ ತಂದಿದ್ದರೂ ಅವುಗಳು ಸಮರ್ಪಕವಾಗಿ ಜಾರಿಯಾಗದೇ ನಗರ ಪ್ರದೇಶದಲ್ಲಿಯೂ ಮಹಿಳೆಯರು ಇನ್ನೂ ಬಯಲು ಪ್ರದೇಶದಲ್ಲಿ ತಮ್ಮ ನಿತ್ಯಕರ್ಮ ಪೂರೈಸುಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ.

Advertisement

ಪಟ್ಟಣದ ವಾರ್ಡ್‌ ನಂ 14 ರ ಖಾಜಾ ಕಾಲೋನಿ ಬಡಾವಣೆಯಲ್ಲಿ 1200 ಕ್ಕೂ ಅಧಿಕ ಜನಸಂಖ್ಯೆ ಇದೆ. ಇಲ್ಲಿ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಹಾಗೂ ಬಡ ಕೂಲಿಕಾರ್ಮಿಕ ಜನರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಬೀದಿ ವ್ಯಾಪಾರ ಹಾಗೂ ಕೂಲಿ ಕೆಲಸವೇ ಇಲ್ಲಿನ ಬಹುತೇಕ ಜನರ ಉದ್ಯೋಗ. ಇಲ್ಲಿ ಕಾಲಿಡಬೇಕಾದರೇ ಮೂಗು
ಮುಚ್ಚಿಕೊಂಡು ಬರಬೇಕು. ಎಲ್ಲಿ ನೋಡಿದರಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ನಡೆಯಲು ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬಯಲಲ್ಲಿ ಮಹಿಳೆಯರ ಮಲಮೂತ್ರ ವಿಸರ್ಜನೆ, ಬಲ್ಬ್ಗಳಿಲ್ಲದ ವಿದ್ಯುತ್‌ ಕಂಬಗಳು, ಅಲಲ್ಲಿ ದಟ್ಟವಾಗಿ ಬೆಳೆದು ನಿಂತ ಜಾಲಿಕಂಟಿಗಳು, ಕುಡಿಯುವ ನೀರಿನ ಸಮಸ್ಯೆ ಹೀಗೆ ಹಲವಾರು ಸಮಸ್ಯೆ ಹೊತ್ತುಕ್ಕೊಂಡಿರುವ ಖಾಜಾ ಕಾಲೋನಿ
ಪಟ್ಟಣದಲ್ಲಿಯೇ ಅತ್ಯಂತ ತೀರಾ ಹಿಂದುಳಿದ ವಾರ್ಡ್‌ ಆಗಿದೆ. ಪುರಸಭೆ ವತಿಯಿಂದ ಇಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇಲ್ಲಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ವಾರ್ಡ್‌ ಸದಸ್ಯರಿಗೆ, ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಹಲವಾರು ವರ್ಷಗಳಿಂದ ರಸ್ತೆ, ಚರಂಡಿ, ಮಹಿಳೆಯರ ಶೌಚಾಲಯ ಸಮಸ್ಯೆ ಇಲ್ಲಿನ ಜನರನ್ನು ಕಾಡುತ್ತಿದೆ.

ಪುರಸಭೆ ವತಿಯಿಂದ ಮಹಿಳಾ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಬಳಕೆಗೆ ಮುನ್ನವೇ ಹಾಳಾಗಿ ಹಂದಿ, ನಾಯಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಇಲ್ಲಿನ ಮಹಿಳೆಯರು ರಸ್ತೆ ಬದಿ ಅಥವಾ ಜಾಲಿಕಂಟಿಗಳ ಮರೆಯಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಮಾತ್ರ ತಪ್ಪಿಲ್ಲ. ಅಲ್ಲಲ್ಲಿ ಕೆಲವು ಕಡೆ ಸಿಸಿ ರಸ್ತೆ ಮಾಡಲಾಗಿದೆ. ಆದರೆ ಕಳಪೆ
ಕಾಮಗಾರಿ ಹಾಗೂ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿರುವುದರಿಂದ ಗಲೀಜು ನೀರು ರಸ್ತೆ ಮೇಲೆ ಹರಿದು ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಹತ್ತಾರು ಬಾರಿ ಇಲ್ಲಿನ ಮಹಿಳೆಯರು, ಮಕ್ಕಳು, ಯುವಕರು ಸಮಸ್ಯೆ ಹೊತ್ತು ಪುರಸಭೆಗೆ ಹೋದರೆ ಬರೀ ಭರವಸೆ ಮೂಲಕವೇ ಉತ್ತರ ಲಭಿಸಿದೆ. ಆದರೆ ನಯಾಪೈಸೆ ಕಾಮಗಾರಿ ಕೈಗೆತ್ತಿಕೊಳ್ಳದಿರುವುದು ಸ್ಥಳೀಯರಲ್ಲಿ ಬೇಸರ ತರಿಸಿದೆ. ಕಳೆದ 4 ವರ್ಷಗಳಲ್ಲಿ ಪುರಸಭೆಗೆ ಸಾಕಷ್ಟು ಅನುದಾನ ಬಂದರೂ ಅಗತ್ಯವಿರುವ ಕಡೆ ಕಾಮಗಾರಿ ಮಾಡದೇ ಜನವಸತಿ ಇಲ್ಲದ ಕಡೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.

Advertisement

ಸಂಬಂಧಪಟ್ಟವರು ಕೂಡಲೇ ಚರಂಡಿ, ಸಿಸಿ ರಸ್ತೆ, ಮಹಿಳೆಯರ ಶೌಚಾಲಯ ಹಾಗೂ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆವಾಜ್‌ ಯೂತ್‌ ವೆಲ್ಫೆಧೀರ್‌ ಸೊಸೈಟಿಯ ಮಹ್ಮದ್‌ ಗೌಸ್‌, ಮಹ್ಮದ್‌ ರಫೀಕ್‌ ಜಮಾದಾರ ಆಗ್ರಹಿಸಿದ್ದಾರೆ.

„ ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next