Advertisement

ಚಂದ್ರಗಿರಿಯಲ್ಲಿ ಬಾಲ್ಯವಿವಾಹಕ್ಕೆ ತಡೆ

10:45 AM May 24, 2019 | Team Udayavani |

ಧಾರವಾಡ: ತಾಲೂಕಿನ ಚಂದ್ರಗಿರಿ ಗ್ರಾಮದಲ್ಲಿ ಗುರುವಾರ ನಡೆಯಲಿದ್ದ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ತಡೆ ಹಿಡಿದಿದೆ.

Advertisement

ಚಂದ್ರಗಿರಿಯ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಗೊಡಚಿನಮಲಕ್ಕಿ ಗ್ರಾಮದ ಪರಶುರಾಮ ದಾಸನಟ್ಟಿ ಎಂಬ ಯುವಕನೊಂದಿಗೆ ಮದುವೆ ಮಾಡಲು ಪೋಷಕರು ನಿರ್ಧರಿಸಿ, ಮೇ 23ರಂದು ಮದುವೆ ಮಾಡಲು ತಯಾರಿ ಕೈಗೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ರಕ್ಷಣಾ ಘಟಕವು, ಬಾಲಕಿಯ ಮನೆಗೆ ಭೇಟಿ ನೀಡಿ ಪೋಷಕರಿಗೆ ತಿಳಿ ವಧು ಹಾಗೂ ವರನ ಪೋಷಕರಿಗೆ ನೋಟಿಸ್‌ ಜಾರಿ ಮಾಡಿ ಸಂಜೆ ವೇಳೆ ಘಟಕಕ್ಕೆ ಹಾಜರಾಗುವಂತೆ ಸೂಚಿಸಲಾಯಿತು.

ಈ ಸೂಚನೆ ಅನ್ವಯ ಘಟಕಕ್ಕೆ ಬಾಲಕಿಯೊಂದಿಗೆ ಭೇಟಿ ನೀಡಿ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದು, ಅಲ್ಲದೇ ಮೇ 28ರಂದು ನಡೆಯುವ ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರಾಗುವಂತೆ ಮರು ನೋಟಿಸ್‌ ಜಾರಿ ಮಾಡಲಾಯಿತು. ಅಷ್ಟೇ ಅಲ್ಲದೇ ಬಾಲಕಿಯನ್ನು ವಶಕ್ಕೆ ಪಡೆದು ನವನಗರದ ಸ್ನೇಹಾ ತೆರೆದ ತಂಗುದಾಣದಲ್ಲಿ ಪುನರ್ವಸತಿಗಾಗಿ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next