Advertisement

ಮುಸ್ಲಿಂ-ದಲಿತರ ಮೇಲಿನ ದೌರ್ಜನ್ಯ ತಡೆಯಿರಿ

10:14 AM Jul 06, 2019 | Suhan S |

ಹುನಗುಂದ: ದೇಶಾದ್ಯಂತ ಮುಸ್ಲಿಂ ಮತ್ತು ದಲಿತ ಸಮುದಾಯ ಜನಾಂಗದ ಮೇಲೆ ನಿರಂತರ ಸಾಮೂಹಿಕ ದೌರ್ಜನ್ಯ, ಹಲ್ಲೆ, ಹತ್ಯೆ, ಅತ್ಯಾಚಾರ ಘಟನೆಗಳನ್ನು ತಡೆಯಲು ಆಗ್ರಹಿಸಿ ಶುಕ್ರವಾರ ತಹಶೀಲ್ದಾರ್‌ ಕಚೇರಿ ಎದುರು ಮುಸ್ಲಿಂ ಹಾಗೂ ದಲಿತ ಸಮುದಾಯದವರು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಜೆಡಿಎಸ್‌ ತಾಲೂಕಾಧ್ಯಕ್ಷ ಹಾಗೂ ಮುಸ್ಲಿಂ ಮುಖಂಡ ಜಬ್ಟಾರ ಕಲಬುರ್ಗಿ ಮಾತನಾಡಿ, ಜಾರ್ಖಂಡ ಮುಸ್ಲಿಂ ಯುವಕ ತಬರೇಜ್‌ ಅನ್ಸಾರಿ ಮೇಲೆ ಗುಂಪು ಹತ್ಯೆ ಮಾಡಿ ದೇಶದಲ್ಲಿ ಕೋಮುವಾದಿ ಶಕ್ತಿಗಳು ಜಾತಿ ನಿಂದನೆ ಮತ್ತು ಧಾರ್ಮಿಕ ಭಾವನೆ ದಕ್ಕೆವುಂಟು ಮಾಡಿದೆ ಎಂದರು.

ಮುಸ್ಲಿಂ ಜಾಗೃತಿ ವೇದಿಕೆಯ ಸಂಸ್ಥಾಪಕ ಮಹಿಬೂಬು ಗದ್ವಾಲ ಮಾತನಾಡಿದರು. ತಹಶೀಲ್ದಾರ್‌ ಕಚೇರಿವರಿಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಶಬ್ಬೀರ ಮುಲ್ಲಾ, ಸಫರ್ರಾಜ ಮೌಲ್ವಿ, ಹನಮಂತ ನಡುವಿನಮನಿ, ರಿಜ್ವಾನ್‌ ಮೌಲ್ವಿ, ರಿಯಾಜ್‌ ಭಾಯ್‌, ಮಹಿಬೂಬು ಕಳ್ಳಿಮನಿ, ಮುಕ್ತಾರ ಲೈನ್‌, ಯುಸೂಫ್‌ ಕಲಬುರ್ಗಿ, ಮೈನುದ್ದೀನ್‌ ಧನ್ನೂರ, ಯಾಸೀನ್‌ ಗಡೇದ, ಅಬುಬಕರ ಪೀರಜಾದೆ, ವಾಸೀಮ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next