Advertisement

ಸಮಾನತೆ ಸಾರುವ ಮಕ್ಕಳ ಚಿತ್ರ : ಸಾಹಿತಿ

10:17 AM Dec 04, 2020 | Suhan S |

ನೆಲಮಂಗಲ: ಶಿಕ್ಷಣದ ಶ್ರೇಷ್ಠತೆಯ ಜತೆ ಸರ್ಕಾರಿ ಶಾಲೆಗಳ ಉಳಿಸುವ ಮೂಲಕ ಸಮಾನತೆಯ ಸಂದೇಶ ಸಾರುವ ಸಾಧನೆಯ ಶಿಖರ ಚಿತ್ರಕ್ಕೆ ಸಹಕಾರ ನೀಡಿ ಎಂದು ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡ ಅಭಿ ಪ್ರಾಯಪಟ್ಟರು.

Advertisement

ತಾಲೂಕಿನ ಬಸವನಹಳ್ಳಿಯ ಸ್ಪಾರ್ಕಲ್‌ ಡ್ಯಾನ್ಸ್‌ ಸ್ಟುಡಿಯೋದಲ್ಲಿ ಸಾಧನೆ ಶಿಖರ ಚಲನಚಿತ್ರ ತಂಡ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎನ್‌.ಈರಣ್ಣಮಧುಗಿರಿಯವರ ನಿರ್ದೇಶನದಲ್ಲಿ ಮೂಡಿಬಂದಿರುವ ಸಾಧನೆ ಶಿಖರಸಿನಿಮಾ ಗ್ರಾಮೀಣ ಸೊಗಡಿನ ಚಿತ್ರಣದ ಮೂಲಕ ಬಾಲಕಾರ್ಮಿಕ ಪದ್ಧತಿ,ಜೀತಪದ್ಧತಿ ದೂರಮಾಡುವ ಹಾಗೂಮಹಿಳಾ ಶಿಕ್ಷಣದ ಮಹತ್ವ ಸಾರುವವಿಶೇಷ ಸನ್ನಿವೇಷ ಚಿತ್ರದಲ್ಲಿ ತರಲಾಗಿದೆ. ಜತೆಯಲ್ಲಿ 7 ಹಾಡು ಹಾಗೂಕಾಮಿಡಿ ಸನ್ನಿವೇಶ ಕಾಣಬಹುದು ಎಂದರು.

ಜಿಲ್ಲೆಯಲ್ಲಿ ಚಿತ್ರೀಕರಣ: ಬೆಂಗ ಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಸುತ್ತಮುತ್ತಲ ಪ್ರದೇಶ ಹಾಗೂ ನೆಲಮಂಗಲ ಪ್ರದೇಶಗಳಲ್ಲಿ ಚಿತ್ರೀಕ ರಣ ಮಾಡಲಾಗಿದ್ದು ಡಿ.12ರಂದುಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಈರಣ್ಣ ತಿಳಿಸಿದರು.

ಹಿರಿಯ ಕಲಾವಿದರು ನಟನೆ: ವೈಜನಾಥ್‌ ಬಿರಾದರ್‌, ಶಂಕನಾದ ಆಂಜಿ® ‌ಪ್ಪ,ಡಾ.ದೊಡ್ಡರಂಗೇಗೌಡ,ಅಪೂರ್ವ ಸೇರಿದಂತೆ ಅನೇಕ ಹಿರಿಯ ಕಲಾವಿದರು ನಟಿಸಿದ್ದು ಬೇಬಿ ಬೈರವಿ,ಪ್ರೀತಮ್‌ ಬಾಲನಟರಾಗಿ ಅಭಿನಯಿಸಿದರೆ ಇಂದೂವಿಶ್ವನಾಥ್‌ಸಂಗೀತನಿರ್ದೇಶಕಿಯಾಗಿದ್ದು ಹತ್ತಾರು ಹೊಸಕ ಲಾವಿದರು ನಟನೆ ಮಾಡಿದ್ಧಾರೆಂದರು.

ಈ ಸಂದರ್ಭದಲ್ಲಿಕಲಾವಿದರಾದ ಶಂಕನಾದಆಂಜಿನಪ್ಪ, ವೈಜನಾಥ್‌ ಬಿರಾದರ್‌, ಮುನೇಗೌಡ, ಪ್ರೀತಮ್‌, ಬಟವಾಡಿ ರಂಗನಾಥ್‌, ಪ್ರತಿಕಾ ವಿತರಕ ಹುಲ್ಲಕುಂಟೆ ಮಹೇಶ್‌ ಮತ್ತಿತರರಿದ್ದರು.

Advertisement

ಕನ್ನಡಪರ ಸಂಘಟನೆಗಳ ಮುಖಂಡರ ಸಭೆ :

 ದೊಡ್ಡಬಳ್ಳಾಪುರ: ಪ್ರತಿಭಟನೆ ಮಾಡುವ ಹಕ್ಕು ನಿಮಗಿದೆ. ಹಾಗೆಂದು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಟಿ.ರಂಗಪ್ಪ ಹೇಳಿದರು.

ಮರಾಠ ಅಭಿವೃದ್ಧಿ ನಿಗಮ ರಚನೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಡಿ.5ರ ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ನಗರದ ಖಾಸಗಿ ಭವನದಲ್ಲಿ ಪೊಲೀಸ್‌ ಇಲಾಖೆಯಿಂದ ನಡೆದ ತಾಲೂಕಿನಕನ್ನಡ ಪರ, ರೈತ ಮತ್ತು ದಲಿತ ಸಂಘಟನೆಗಳ ಮುಖಂಡರಸಭೆಯಲ್ಲಿ ಮಾತನಾಡಿದರು. ಶಾಂತಿಯುತ ಬಂದ್‌ಗೆ ಇಲಾಖೆ ಸಹಕಾರ ಇದೆ. ಮಾನವೀಯ ನೆಲೆಯಲ್ಲಿ ನಿಮ್ಮ ಪ್ರತಿಭಟನೆ ಇರಲಿ ಎಂದು ಸಲಹೆ ನೀಡಿದ ಅವರು, ಪ್ರತಿಭಟನಾ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಬಾರದು ಎಂದು ಎಚ್ಚರಿಸಿದರು.ಈ ವೇಳೆ ಕನ್ನಡಪರ ಹೋರಾಟಗಾರರಾದ ತ.ನ.ಪ್ರಭುದೇವ್‌, ಸಂಜೀವನಾಯಕ್‌ ಮತ್ತಿತರರಿದ್ದರು. ಸರ್ಕಲ್‌ ಇನ್ಸ್‌ಪೆಕ್ಟರ್‌ ನವೀನ್‌ ಕುಮಾರ್‌, ಸಬ್‌ ಇನ್ಸ್‌ಪೆಕ್ಟರ್‌ಗಳಾದ ಸೋಮಶೇಖರ್‌, ಮಂಜುನಾಥ್‌, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next