Advertisement

ರಾಷ್ಟ್ರಪತಿ ಚುನಾವಣೆ ದಲಿತ ವರ್ಸಸ್‌ ದಲಿತ ಅಲ್ಲ: ಮೀರಾ

03:45 AM Jun 28, 2017 | Harsha Rao |

ನವದೆಹಲಿ: ಪ್ರಸಕ್ತ ರಾಷ್ಟ್ರಪತಿ ಚುನಾವಣೆ ದಲಿತ ವರ್ಸಸ್‌ ದಲಿತ ಅಲ್ಲ. ಬದಲಿಗೆ ಸಿದ್ಧಾಂತದ ನಡುವಿನ ಸ್ಪರ್ಧೆ ಎಂದು ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್‌ ಹೇಳಿದ್ದಾರೆ. 

Advertisement

“ನನ್ನ ಉದ್ದೇಶ ಜಾತಿ ವ್ಯವಸ್ಥೆ ನಿರ್ಮೂಲನೆಗೊಳಿಸಿ, ಪ್ರಜಾಸತ್ತಾತ್ಮಕ ಮೌಲ್ಯಕ್ಕೆ ರಕ್ಷಣೆ ಕೊಡುವುದಾಗಿದೆ’ ಎಂದೂ ಅವರು ಹೇಳಿದ್ದಾರೆ. ವಿಪಕ್ಷಗಳ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ನಡೆಸಿದ ಮೊದಲ ಮಾಧ್ಯಮ ಗೋಷ್ಠಿಯಲ್ಲಿ ಅವರು ಹೀಗೆ ಹೇಳಿದ್ದಾರೆ. ನಮ್ಮ ಒಗ್ಗಟ್ಟು ಸಿದ್ಧಾಂತದ ಆಧಾರದ ಮೇಲೆ, ಪ್ರಜಾಪ್ರಭುತ್ವದ ಮೌಲ್ಯದ ಮೇಲೆ, ಸಾಮಾಜಿಕ ನ್ಯಾಯ, ಪತ್ರಿಕಾ ಸ್ವಾತಂತ್ರ್ಯ, ಪಾರದರ್ಶಕತೆ, ಬಡತನ ನಿರ್ಮೂಲನೆ, ಜಾತಿ ವ್ಯವಸ್ಥೆಯ ನಿರ್ಮೂಲನೆ, ಜೊತೆಗೆ ಉನ್ನತ ಮೌಲ್ಯಗಳ ಮೇಲೆ ನಿಂತಿದೆ. ಈ ಸಿದ್ಧಾಂತ ತಮ್ಮ ಹೃದಯಕ್ಕೆ ಹತ್ತಿರವಾಗಿದ್ದು, ಇದರ ರಕ್ಷಣೆಯ ಉದ್ದೇಶದಿಂದಲೇ ತಾವು ಸ್ಪರ್ಧೆಗೆ ಇಳಿದಿದ್ದಾಗಿ ಹೇಳಿದ್ದಾರೆ. ಇದೇ ವೇಳೆ, ಮೀರಾಕುಮಾರ್‌ ಅವರು ಬುಧವಾರ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಅವರಿಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ, ಸಿಪಿಎಂ ನಾಯಕ ಯೆಚೂರಿ ಸಾಥ್‌ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next