Advertisement

ಏಕತಾ ಪ್ರತಿಮೆಗೆ ಸದ್ಯದಲ್ಲೇ ರೈಲು ಸಂಪರ್ಕ

06:15 AM Dec 16, 2018 | Team Udayavani |

ಕೆವಾಡಿಯಾ: ಭಾರತದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಶನಿವಾರ ಏಕತಾ ಪ್ರತಿಮೆಗೆ ಭೇಟಿ ನೀಡಿದರು. 

Advertisement

ಬಳಿಕ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ಆರಂಭಿಸಲು ಉದ್ದೇಶಿಸರುವ ರೈಲು ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈ ರೈಲು ನಿಲ್ದಾಣವು ಏಕತಾ ಪ್ರತಿಮೆಗೆ ಭೇಟಿ ನೀಡುವವರಿಗೆ ಸಂಪರ್ಕದ ಕೊಂಡಿಯಾಗಿ ರೂಪುಗೊಳ್ಳಲಿದೆ. ಮುಂದಿನ ವರ್ಷದ ಸೆಪ್ಟೆಂಬರ್‌ವೊಳಗೆ ಕಾಮಗಾರಿ ಪೂರ್ಣಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. 

“ಈ ನಿಲ್ದಾಣವು ಸರ್ದಾರ್‌ ಪಟೇಲ್‌ಗೆ ರೈಲ್ವೆ ಇಲಾಖೆ ನೀಡುತ್ತಿರುವ ಗೌರವ’ ಎಂದು ಕೋವಿಂದ್‌ ಹೇಳಿದರು. ಪಟೇಲರ ಅತಿ ಎತ್ತರದ ಪ್ರತಿಮೆಯನ್ನು ಸಾಕಾರಗೊಳಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರನ್ನು ಶ್ಲಾ ಸಿದರು.

Advertisement

Udayavani is now on Telegram. Click here to join our channel and stay updated with the latest news.

Next