Advertisement

ಛತ್ರಿ ಪಡೆಯದೇ ಮಳೆಯಲ್ಲೇ ಗೌರವ ವಂದನೆ ಸ್ವೀಕರಿಸಿದ ರಾಷ್ಟ್ರಪತಿ

07:00 AM Oct 09, 2017 | Team Udayavani |

ತಿರುವನಂತಪುರ: ರಾಷ್ಟ್ರಪತಿಯಾದ ಅನಂತರ ಮೊದಲ ಬಾರಿಗೆ ರವಿವಾರ ಕೇರಳಕ್ಕೆ ಭೇಟಿ ನೀಡಿದ ರಾಮನಾಥ ಕೋವಿಂದ್‌ ಅವರು ಎಡೆಬಿಡದೆ ಸುರಿಯುತ್ತಿದ್ದ ಭಾರೀ ಮಳೆಯಲ್ಲೇ ಗೌರವ ವಂದನೆ ಸ್ವೀಕರಿಸಿದರು. 

Advertisement

ಬೆಳಗ್ಗೆ 9.30ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಈ ವೇಳೆ ಭದ್ರತಾ ಸಿಬಂದಿ ಛತ್ರಿಯನ್ನು ತಂದು ಮಳೆಯಿಂದ ರಾಷ್ಟ್ರಪತಿ ರಕ್ಷಣೆಗೆ ಯತ್ನಿಸಿದರು. ಆದರೆ ಛತ್ರಿಯನ್ನು ಬದಿಗಿಟ್ಟು ಮಳೆಯಲ್ಲೇ ಎದ್ದು ನಿಂತು ಸೆಲ್ಯೂಟ್‌ ಹೊಡೆದರು. ಅನಂತರ ಶಾಮಿಯಾನದ ಅಡಿಯಲ್ಲಿ ಕುಳಿತು ಪರೇಡ್‌ ವೀಕ್ಷಿಸಿದರು. ವಿಮಾನನಿಲ್ದಾಣದಲ್ಲಿ ರಾಷ್ಟ್ರಪತಿಯನ್ನು ಸಿಎಂ ಪಿಣರಾಯಿ ವಿಜಯನ್‌ ಮತ್ತು ರಾಜ್ಯಪಾಲ ನ್ಯಾ| ಪಿ. ಸದಾಶಿವಂ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next