Advertisement

ಸುಪ್ರೀಂ ನ್ಯಾಯಮೂರ್ತಿಗಳಾಗಿ ನ್ಯಾ.ಸಂಜೀವ್‌ ಖನ್ನಾ , ನ್ಯಾ.ಮಹೇಶ್ವರಿ 

02:54 PM Jan 16, 2019 | Team Udayavani |

ಹೊಸದಿಲ್ಲಿ : ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಬುಧವಾರ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರು ನೇಮಕ ಮಾಡಿದ್ದಾರೆ. 

Advertisement

ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಅವರಿಗೆ  ಪದೋನ್ನತಿ ನೀಡಲಾಗಿದೆ. 

ಮಂಗಳವಾರ ದಿಲ್ಲಿ  ಹೈಕೋರ್ಟ್‌ನ ಜಡ್ಜ್ ಕೈಲಾಶ್‌ ಗಂಭೀರ್‌ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದು ಇಬ್ಬರಿಗೆ ಪದೋನ್ನತಿ ನೀಡುವ ಬಗ್ಗೆ ಪ್ರಶ್ನಿಸಿದ್ದರು. 

ಹಲವು ಪ್ರಶ್ನೆಗಳ ನಡುವೆಯೇ ಐವರು ನ್ಯಾಯಮೂರ್ತಿಗಳಿದ್ದ ಸುಪ್ರೀಂ ಕೋರ್ಟ್‌ನ  ಕೋಲಿಜಿಯಂ ಮಾಡಿದ್ದ  ಶಿಫಾರಸ್ಸಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಂಕಿತ ಹಾಕಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next