Advertisement

ತ್ರಿವಳಿ ತಲಾಖ್‌ಗೆ ರಾಷ್ಟ್ರಪತಿ ಅಂಕಿತ

01:25 AM Aug 02, 2019 | mahesh |

ಹೊಸದಿಲ್ಲಿ: 2 ದಿನಗಳ ಹಿಂದಷ್ಟೇ ರಾಜ್ಯಸಭೆ ಯಲ್ಲಿ ಅಂಗೀಕಾರಗೊಂಡಿದ್ದ ತ್ರಿವಳಿ ತಲಾಖ್‌ (ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ಸಂರಕ್ಷಣಾ ಮಸೂದೆ) ಕುರಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಗುರುವಾರ ಸಹಿ ಹಾಕಿದ್ದಾರೆ.

Advertisement

ಬುಧವಾರ ಕೇಂದ್ರದ ಗೆಜೆಟ್ ಪ್ರಕಟಣೆಯಲ್ಲಿ ಮಸೂದೆಗೆ ರಾಷ್ಟ್ರಪತಿಯವರ ಸಹಿ ಹಾಕಿರುವ ವಿಚಾರವನ್ನು ಉಲ್ಲೇಖೀಸಲಾಗಿದೆ. ಹಾಗಾಗಿ, ಮಸೂದೆಯು ಕಾನೂನಾಗಿ ಜಾರಿಯಾಗಿದ್ದು, ಮುಸ್ಲಿಂ ಸಮುದಾಯದಲ್ಲಿ ಏಕಕಾಲಕ್ಕೆ 3 ಬಾರಿ ತಲಾಖ್‌ ಎಂದು ಉಚ್ಛರಿಸಿ, ಆ ಕ್ಷಣದಲ್ಲೇ ವಿಚ್ಛೇದನ ನೀಡಬಹುದಾಗಿದ್ದ ಪುರಾತನ ಪದ್ಧತಿ ಶಿಕ್ಷಾರ್ಹ ಅಪರಾಧವಾಗಲಿದೆ. ವಾಟ್ಸ್‌ಆ್ಯಪ್‌, ಮೊಬೈಲ್ ಅಥವಾ ಇನ್ಯಾವುದೇ ವಿದ್ಯುನ್ಮಾನ ಸಂವಹನದ ಮೂಲಕ ತಲಾಖ್‌ ಸಂದೇಶ ರವಾನಿಸಿದರೂ ಅದು ಕೂಡ ಶಿಕ್ಷಾರ್ಹವಾಗಲಿದೆ. ಇಂಥ ತಪ್ಪು ಮಾಡುವ ಪತಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next