Advertisement

ಕೂಡಲಸಂಗಮದಲ್ಲಿ ಭಕ್ತರ ದರ್ಶನಕ್ಕೆ ಸಿದ್ಧತೆ

10:11 AM May 30, 2020 | Suhan S |

ಕೂಡಲಸಂಗಮ: ಜೂನ್‌ 1ರಿಂದ ದೇವಾಲಯಗಳ ಪ್ರವೇಶಕ್ಕೆ ಅವಕಾಶ ದೊರೆಯುವ ನಿರೀಕ್ಷೆಯೊಂದಿಗೆ ಸುಕ್ಷೇತ್ರ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಭಕ್ತರ ದರ್ಶನಕ್ಕೆ ಸಿದ್ಧಗೊಳುತ್ತಿದೆ.

Advertisement

ಶುಕ್ರವಾರ ಬೆಳಗೆಯಿಂದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಿಬ್ಬಂದಿ ಸ್ವಚ್ಛತಾ ಅಭಿಯಾನ, ದರ್ಶನದ ಮಾರ್ಗದುದ್ದಕ್ಕೂ 6 ಮೀಟರ್‌ಗೆ ಒಂದರಂತೆ ಚೌಕಾಕಾರದ ಬಾಕ್ಸ್‌ಗೆ ಬಣ್ಣ ಹಚ್ಚುವ ಕಾರ್ಯ ಆರಂಭಗೊಂಡಿದೆ. ಸರ್ಕಾರ ಲಾಕ್‌ಡೌನ್‌ ಮಾಡಿ ದೇವಾಲಯ ಪ್ರವೇಶಕ್ಕೆ ಅವಕಾಶ ಕೊಡಬಾರದು ಎಂದು ಸೂಚಿಸಿದಂತೆ ಮಂಡಳಿಯು ಮಾ. 17ರಿಂದಲೇ ಸಂಗಮೇಶ್ವರ ದೇವಾಲಯ ಪ್ರವೇಶ ನಿಷೇಧಿಸಿತ್ತು. ಏ. 12ರಂದು ನಡೆಯಬೇಕಿದ್ದ ಸಂಗಮೇಶ್ವರ ಜಾತ್ರೆ ರದ್ದುಗೊಂಡು ದರ್ಶನಕ್ಕೆ ಅವಕಾಶ ಕೊಟ್ಟಿರಲಿಲ್ಲ. ದೇವಾಲಯ ಪ್ರವೇಶಕ್ಕೆ ಸರ್ಕಾರದಿಂದ ಅಧಿಕೃತ ಆದೇಶ, ಮಾರ್ಗಸೂಚಿ ಬಂದಿಲ್ಲ, ಬಂದ ನಂತರ ಭಕ್ತರಿಗೆ ದೇವಾಲಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಸದ್ಯ ಸಿಬ್ಬಂದಿಯಿಂದ ಸಿದ್ಧತೆಯ ಕಾರ್ಯ ನಡೆಸಿದ್ದೇವೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತೆ ರಾಜಶ್ರೀ ಅಗಸರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next