Advertisement

ದಸರಾ ಗಜಪಯಣಕ್ಕೆ ಭರದ ಸಿದ್ಧತೆ

05:24 PM Sep 01, 2018 | |

ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಗಜಪಯಣಕ್ಕೆ ವೀರನಹೊಸಳ್ಳಿಯಲ್ಲಿ ಭಾನುವಾರ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಸಿದ್ಧತೆಗಳು ಬರದಿಂದ ಸಾಗಿದೆ. ನಾಗರಹೊಳೆ ಮುಖ್ಯ ರಸ್ತೆಯ ಎರಡು ಬದಿ ಗಿಡಗಂಟಿಗಳನ್ನು ತೆರವುಗೊಳಿಸಲಾಗುತ್ತಿದೆ. ಕಾರ್ಯಕ್ರಮ ನಡೆಯುವ ವೇದಿಕೆ ಹಾಗೂ ಗಜ ಪಯಣ ನಾಗರಹೊಳೆ ಉದ್ಯಾನವನದ ಹೆಬ್ಟಾಗಿಲಿನ ಬಳಿ ಸ್ಥಳವನ್ನು ಸಿದ್ಧಗೊಳಿಸಲಾಗುತ್ತಿದೆ.

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಟಾಗಿಲು ವೀರನಹೊಸಳ್ಳಿ ಗೇಟ್‌ನಿಂದ ಸುಮಾರು ಅರ್ಧ ಕಿ.ಮೀ. ದೂರದ ಜಂಗಲ್‌ ಇನ್‌ ರೆಸಾರ್ಟ್‌ ಪಕ್ಕದ ಖಾಸಗಿಯವರ ಭೂಮಿಯಲ್ಲಿ ವಿಶಾಲವಾದ ಪೆಂಡಾಲ್‌ ನಿರ್ಮಿಸಲಾಗುತ್ತಿದೆ. ಈಗಾಗಲೇ ಭೂಮಿಯನ್ನು ಸಮತಟ್ಟು ಮಾಡಲಾಗಿದೆ.
 
ವಾಹನಗಳ ಪಾರ್ಕಿಂಗ್‌ಗೆ ಪ್ರತ್ಯೇಕ ಜಾಗ ಸಿದ್ಧಗೊಳಿಸಲಾಗುತ್ತಿದೆ. ಮುಖ್ಯ ರಸ್ತೆಯಲ್ಲಿ ಗಜಗಳ ಪಯಣಕ್ಕೆ ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ರಸ್ತೆ ಬದಿ ತೆರವು: ವೀರನಹೊಸಳ್ಳಿ ಗೇಟ್‌ನಿಂದ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಮೂರನೇ ಬ್ಲಾಕ್‌ವರೆಗಿನ ಸುಮಾರು 3.ಕಿ.ಮೀ. ವರೆಗಿನ ಎರಡು ಬದಿಯ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸಲಾಗುತ್ತಿದೆ. ರಸ್ತೆಯ ಮೋರಿಗಳಿಗೆ ಸುಣ್ಣ-ಬಣ್ಣ ಬಳಿಯಲಾಗುತ್ತಿದೆ.

ಇದಕ್ಕಾಗಿ ಜೆಸಿಬಿ ಯಂತ್ರಗಳು, ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಎಲ್ಲವೂ ದಸರಾ ಸಮಿತಿದ ಅಧ್ಯಕ್ಷ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಮಾರ್ಗದರ್ಶನದಲ್ಲಿ ಗಜಪಯಣದ ಉಸ್ತುವಾರಿ ಗಳಾದ ಡಿಸಿಎಫ್‌ ಸಿದ್ದರಾಮಪ್ಪ ಚಳಕಾಪುರೆ, ಆರ್‌ ಎಫ್‌ಒ ಅನನ್ಯಕುಮಾರ್‌ ನೇತೃತ್ವದಲ್ಲಿ ಎಲ್ಲವೂ ನಡೆಯುತ್ತಿದೆ.

ಎಸ್‌ಪಿಎಸಿ ಸ್ಥಳ ಪರಿಶೀಲನೆ: ಗಜ ಪಯಣದ ಸಿದ್ಧತೆಗಳನ್ನು ಉಪ ವಿಭಾಗಾಧಿಕಾರಿ ಕೆ.ನಿತೀಶ್‌, ಎಸ್‌ಪಿ ಅಮಿತ್‌ಸಿಂಗ್‌, ಹುಲಿಯೋಜನೆ ಕ್ಷೇತ್ರ ನಿರ್ದೇಶಕ ಆರ್‌.ರವಿಶಂಕರ್‌, ಎಸಿಎಫ್‌ ಪ್ರಸನ್ನ ಕುಮಾರ್‌, ಡಿವೈಎಸ್‌ಪಿ ಭಾಸ್ಕರ ರೈ, ಎಸ್‌ಐ ಪುಟ್ಟಸ್ವಾಮಿ, ತಾಪಂ ಇಒ ಕೃಷ್ಣಕುಮಾರ್‌, ತಹಶೀಲ್ದಾರ್‌ ಮೋಹನ್‌, ಲೋಕೋಪಯೋಗಿ ಇಲಾಖೆ ಎಇಇ ಕೃಷ್ಣ, ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ಹೊನ್ನೇಗೌಡ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮಾರ್ಗದರ್ಶನ ಮಾಡಿದರು.

ಸೆ.3ಕ್ಕೆ ದಸರಾ ಗಜಪಡೆ ಅರಮನೆ ಪ್ರವೇಶ
ಮೈಸೂರು:
ಮೈಸೂರು ಅರಮನೆ ಮಂಡಳಿವತಿಯಿಂದ ಸೆ.3ರಂದು ಬೆಳಗ್ಗೆ 11ಗಂಟೆಗೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ನಾಡಹಬ್ಬ 2018ರ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡದ ಅಂಬಾರಿ ಆನೆ ಅರ್ಜುನ ನೇತೃತ್ವದ ಆರು ಆನೆಗಳಿಗೆ ಸ್ವಾಗತ ನೀಡಲಾಗುವುದು. 

Advertisement

ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ ಅವರ ಘನ ಉಪಸ್ಥಿತಿಯಲ್ಲಿ ಗಜಪಡೆಗೆ ಸ್ವಾಗತ ನೀಡಲಾಗುವುದು. ಶಾಸಕ ಎಸ್‌.ಎ.ರಾಮದಾಸ್‌ ಅಧ್ಯಕ್ಷತೆ ವಹಿಸುವರು. ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್‌, ಸಂಸದರಾದ ಪ್ರತಾಪ್‌ ಸಿಂಹ, ಧ್ರುವನಾರಾಯಣ, ಮೈಸೂರು ಮಹಾನಗರಪಾಲಿಕೆ ಮೇಯರ್‌ ಬಿ.ಭಾಗ್ಯವತಿ, ಉಪಮೇಯರ್‌ ಇಂದಿರಾ, ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನ, ಶಾಸಕರಾದ ಅಡಗೂರು ಎಚ್‌.ವಿಶ್ವನಾಥ್‌, ತನ್ವೀರ್‌ ಸೇಠ್ಠ, ಕೆ.ಮಹದೇವ್‌, ಎಲ್‌.ನಾಗೇಂದ್ರ, ಡಾ.ಯತೀಂದ್ರ, ಅಶ್ವಿ‌ನ್‌ ಕುಮಾರ್‌, ಹರ್ಷವರ್ಧನ್‌, ಅನಿಲ್‌ ಚಿಕ್ಕಮಾದು, ವಿಧಾನ ಪರಿಷತ್‌ ಸದಸ್ಯರಾದ ಸಂದೇಶ್‌ ನಾಗರಾಜು, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಆರ್‌.ಧರ್ಮಸೇನ, ಕೆ.ವಿ. ನಾರಾಯಣಸ್ವಾಮಿ, ಜಿಪಂ ಉಪಾಧ್ಯಕ್ಷ ಜಿ.ನಟರಾಜ್‌, ಮೈಸೂರು ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ತಾಪಂ ಉಪಾಧ್ಯಕ್ಷ ಎನ್‌ .ಬಿ.ಮಂಜು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next