Advertisement

ವೀರಪುತ್ರನಿಗೆ ತೆರೆಮರೆಯ ತಯಾರಿ

04:07 AM May 22, 2020 | Lakshmi GovindaRaj |

ಕಳೆದ ವರ್ಷ ಬಿಡುಗಡೆಯಾದ ಸಪ್ಲಿಮೆಂಟರಿ ನಿರ್ಮಿಸಿದ್ದ ಚಿತ್ರತಂಡ ಈಗ ಹೊಸ ಚಿತ್ರಕ್ಕಾಗಿ ಮತ್ತೆ ಒಂದಾಗಿದೆ. ಈಗ ವೀರಪುತ್ರ ಎಂಬ ಮತ್ತೂಂದು ಸಿನಿಮಾ ಮಾಡಲು ಮುಂದಾಗಿದೆ. ನಿರ್ಮಾಪಕರಾದ ಗುರು ಬಂಡಿ ಹಾಗೂ  ನಿರ್ದೇಶಕ ಡಾ.ದೇವರಾಜ್‌ ಅವರ ಕಾಂಬಿನೇಶನ್‌ನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಈ ನೂತನ ಚಿತ್ರಕ್ಕೆ ವೀರಪುತ್ರ ಎಂಬ ಹೆಸರಿಡಲಾಗಿದ್ದು, ವಿನೂತನ ಕಥಾಹಂದರ ಹೊಂದಿದೆಯಂತೆ.

Advertisement

ಸದ್ಯ ಚಿತ್ರತಂಡ ಚಿತ್ರತಂಡ ಪ್ರೀ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿಕೊಂಡಿದೆ. ಸಪ್ಲಿಮೆಂಟರಿಯಂತಹ ಉತ್ತಮ ಚಿತ್ರ ನೀಡಿರುವ ತೃಪ್ತಿಯಲ್ಲಿರುವ ನಿರ್ಮಾಪಕ ಗುರು ಬಂಡಿ ಹಾಗೂ ನಿರ್ದೇಶಕ ಡಾ. ದೇವರಾಜ್‌ ಅವರು ವೀರಪುತ್ರ ಚಿತ್ರದ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಹಿಡಿಸುವಂತಹ ಕಥೆಯ ಮೂಲಕ ಪ್ರೇಕ್ಷಕರನ್ನು ತಲುಪುವ ಉತ್ಸಾಹದಲ್ಲಿದ್ದಾರೆ. ಗುರು ಬಂಡಿ ಅವರು ತನ್ವಿ ಪ್ರೊಡಕ್ಷನ್‌ ಹೌಸ್‌ ಮೂಲಕ ಧೀರ ಸಾಮ್ರಾಟ್‌ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದು, ಈಗಾಗಲ್ಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್‌  ಪ್ರೊಡಕ್ಷನ್ಸ್‌ ಬಿರುಸಿನಿಂದ ಸಾಗಿದೆ.

ವೀರಪುತ್ರ ಸಹ ತನ್ವಿ ಪ್ರೊಡಕ್ಷನ್‌ ಹೌಸ್‌ ಮೂಲಕ ಗುರು ಬಂಡಿ ಅವರೆ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರಾಘವ್‌ ಸುಭಾಷ್‌ ಸಂಗೀತ ನಿರ್ದೇಶನ, ಸುಭಾಷ್‌ ಬೆಟಗೇರಿ ಸಾಹಿತ್ಯ ಹಾಗೂ ಸಾಗರ್‌ ಗುಲ್ಬರ್ಗ ನೃತ್ಯ  ನಿರ್ದೇಶನ ವೀರಪುತ್ರ ಚಿತ್ರಕ್ಕಿದೆ. ಉಳಿದ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ನಾಯಕ, ನಾಯಕಿ, ಪೋಷಕ ಕಲಾವಿದರ ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next