Advertisement

ಬಿಜೆಪಿಯ ಒನ್‌ ಪ್ಲಸ್‌ ಒನ್‌ ಟಾಸ್ಕ್ ಅನುಷ್ಠಾನಕ್ಕೆ ಸಿದ್ಧತೆ !

11:36 PM Apr 01, 2023 | Team Udayavani |

ಬಾಗೇಪಲ್ಲಿ: ರಾಜ್ಯದಲ್ಲಿ ಅಧಿಕಾರಕ್ಕೆ ಮತ್ತೆ ಬರಲು ಬಿಜೆಪಿ ಮೆಗಾ ಪ್ಲ್ಯಾನ್ ನಡೆಸುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಿಎಂ ಬೊಮ್ಮಾಯಿ ಹಾಗೂ ಬಾಗೇಪಲ್ಲಿಯಿಂದ ಆರೋಗ್ಯ ಸಚಿವ ಡಾ| ಸುಧಾಕರ್‌ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

Advertisement

ಬಿಜೆಪಿಯ ಒನ್‌ ಪ್ಲಸ್‌ ಒನ್‌ ಟಾಸ್ಕ್ ಅನುಷ್ಠಾನಕ್ಕೆ ಸಕಲ ಸಿದ್ಧತೆ ಹಾಗೂ ಚಿಂತನೆ ನಡೆಸಿದ್ದು, ರೆಸಾರ್ಟ್‌ ಸಭೆಯಲ್ಲಿ ಸಿಎಂ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಚರ್ಚೆ ನಡೆದಿದೆ. ಚಿಕ್ಕಬಳ್ಳಾಪುರದಿಂದ ಮುಖ್ಯಮಂತ್ರಿಗಳು ಸ್ಪರ್ಧಿಸಿದರೆ 7-8 ಕ್ಷೇತ್ರಗಳಲ್ಲಿ ಲಾಭವಾಗುವ ಲೆಕ್ಕಾಚಾರ ನಡೆದಿದೆ.

ಚಿಕ್ಕಬಳ್ಳಾಪುರಕ್ಕೆ ಸಿಎಂ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದ್ದು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಸೇರಿ ಸುತ್ತಮುತ್ತಲ ಭಾಗದಲ್ಲಿ ಬಿಜೆಪಿಗೆ ಲಾಭವಾಗಬಹುದೆಂಬ ನಿರೀಕ್ಷೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next