Advertisement

ಕರಡಿ ದಾಳಿಗೆ ಗರ್ಭಿಣಿ ಸಾವು

06:10 AM Jan 19, 2018 | Team Udayavani |

ಕನಕಪುರ: ಆಕೆ 9 ತಿಂಗಳ ಗರ್ಭಿಣಿ. ಇನ್ನು 8 ದಿನದಲ್ಲಿ ಆಕೆಯ ಮನೆಯಲ್ಲಿ ತೊಟ್ಟಿಲು ತೂಗಬೇಕಿತ್ತು. ಮನೆ ಮಂದಿಯೆಲ್ಲಾ ಹೊಸ ಕಂದನ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದರು. ಆದರೆ, ಗುರುವಾರ ಬಹಿರ್ದೆಸೆಗೆ ಹೋದವಳು ಕರಡಿ ದಾಳಿಗೆ ಸಿಲುಕಿ ಬಲಿಯಾದಳು. ಜೊತೆಗೆ ಇನ್ನೇನು ಪ್ರಪಂಚ ನೋಡಬೇಕಿದ್ದ ಶಿಶು ಕೂಡ ತಾಯಿಯ ಒಡಲನ್ನು ಸೇರಿಕೊಂಡಿತ್ತು.

Advertisement

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಚೌಕಸಂದ್ರದ ಪ್ರದೀಪಕುಮಾರ್‌ ನಾಯಕ್‌ ಎಂಬುವರ ಪತ್ನಿ ಸುಮಾಬಾಯಿ(26) ಎಂಬ ಗರ್ಭಿಣಿ ಗುರುವಾರ ಬೆಳಗಿನ ಜಾವ ತಮ್ಮ ಮನೆಯ ಹಿಂದೆ ಬಹಿರ್ದೆಸೆಗೆ ತೆರಳಿದ್ದರು. ಈ ವೇಳೆ, ಕರಡಿ ಏಕಾಏಕಿ ದಾಳಿ ನಡೆಸಿತು. ಕುತ್ತಿಗೆ, ಕಿವಿ ಸೇರಿದಂತೆ ದೇಹದ ಇತರ ಭಾಗಗಳನ್ನು ಗಾಯಗೊಳಿಸಿತು. ತೀವ್ರ ರಕ್ತಸ್ರಾವದಿಂದ ನರಳುತ್ತಾ ಆಕೆ ಚೀರಾಟ ನಡೆದಳು.

ಇದನ್ನು ಕೇಳಿಸಿಕೊಂಡ ಪತಿ ಪ್ರದೀಪಕುಮಾರ್‌ ನಾಯಕ್‌ ಸ್ಥಳಕ್ಕೆ ಓಡಿ ಬಂದರು. ಅಷ್ಟೋತ್ತಿಗಾಲೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ದಿನೇಶ್‌ ಭೇಟಿ ನೀಡಿ, 5 ಲಕ್ಷ ರೂ.ಪರಿಹಾರವನ್ನು ಸರ್ಕಾರದಿಂದ
ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next