Advertisement

ಗರ್ಭಿಣಿ ಶುಶ್ರೂಷಕಿಗೆ ಸಿಎಂ ಅಭಿನಂದನೆ

01:09 AM May 11, 2020 | Sriram |

ತೀರ್ಥಹಳ್ಳಿ: ಕೋವಿಡ್ -19 ಕಂಟಕದ ಮಧ್ಯೆ ತುಂಬು ಗರ್ಭಿಣಿಯಾಗಿದ್ದರೂ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿರುವ ಶುಶ್ರೂಶಕಿಯೊಬ್ಬರಿಗೆ ಖುದ್ದು ಮುಖ್ಯಮಂತ್ರಿ ದೂರವಾಣಿ ಕರೆ ಮಾಡಿ ಅಭಿನಂದಿಸಿದರು.

Advertisement

ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೂಪಾ ಅವರಿಗೆ ಸಿಎಂ ಬಿ.ಎಸ್‌. ಯಡಿಯೂರಪ್ಪ ರವಿವಾರ ದೂರವಾಣಿ ಕರೆ ಮಾಡಿ ಅಭಿನಂದಿಸಿದರಲ್ಲದೆ, ಇನ್ನು ಮುಂದೆ ರಜೆ ಪಡೆಯುವಂತೆ ಸೂಚಿಸಿದರು. ರೂಪಾ ಅವರು ಪ್ರತಿದಿನ 110 ಕಿ.ಮೀ. ಪ್ರಯಾಣಿಸಿ ಆಸ್ಪತ್ರೆಗೆ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ. ಶುಶ್ರೂಶಕಿ ರೂಪಾ ಅವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಸಿಎಂ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಅದನ್ನು ಅನಂತರ ಬಗೆಹರಿಸೋಣ ಎಂದವರು ಭರವಸೆ ನೀಡಿದರು.

ಖುದ್ದು ಸಿಎಂ ಕರೆ ಮಾಡಿದಾಗ ನನಗೆ ನಂಬಲು ಆಗಲಿಲ್ಲ. ಅನಂತರ ಖುಷಿಯಾಯ್ತು. ರವಿವಾರದಿಂದಲೇ ವಿಶ್ರಾಂತಿ ತೆಗೆದುಕೊಳ್ಳಿ ಎಂದರು. ಅದರಂತೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ.
-ರೂಪಾ, ಶುಶ್ರೂಷಕಿ

 

Advertisement

Udayavani is now on Telegram. Click here to join our channel and stay updated with the latest news.

Next