Advertisement

Sirsi: ಪ್ರೀತಮ್ ಆತ್ಮಹತ್ಯೆ ಹಿಂದೆ ಬ್ಲಾಕ್ ಮೇಲ್, ಆರೋಪಿಗಳನ್ನು ಬಂಧಿಸದಿದ್ದರೆ ಶಿರಸಿ ಬಂದ್

01:05 PM Jun 01, 2024 | Team Udayavani |

ಶಿರಸಿ: ನಗರದ ಕಾಮಧೇನು ಜ್ಯೂವೆಲ್ಲರ್ಸ್ ಮಾಲಕರ ಮಗ ಪ್ರೀತಮ್ ಪಾಲನಕರ್ ಆತ್ಮಹತ್ಯೆ ಪ್ರಕರಣ ಹಿಂದೆ ಬ್ಲಾಕ್ ಮೇಲ್‌ ದೂರಿದ್ದು ತಕ್ಷಣ ಆರೋಪಿತರನ್ನು ಬಂಧಿಸಿ ಕಾನೂನು‌ ಕ್ರಮ ಕೈಗೊಳ್ಳದೇ ಹೋದರೆ‌ ಶಿರಸಿ ಬಂದ್ ಗೆ ಕರೆ ನೀಡಲಾಗುತ್ತದೆ ಎಂದು‌ ಜೆಡಿಎಸ್ ಮುಖಂಡ ಉಪೇಂದ್ರ ಪೈ ಎಚ್ಚರಿಸಿದ್ದಾರೆ.

Advertisement

ಶನಿವಾರ ನಗರದಲ್ಲಿ ಸಹಾಯಕ ಆಯುಕ್ತರಿಗೆ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ನೀಡಿ, ಘಟನೆ‌ ನಡೆದು 17 ದಿನ ಆದರೂ ಆರೋಪಿಗಳನ್ನು ಬಂಧಿಸಲು ಆಗಲಿಲ್ಲ.

ಈಗಾಗಲೇ ಮೂವರು ಆರೋಪಿತರು ಬ್ಲಾಕ್ ಮೇಲ್‌ಮಾಡಿದ್ದರ ಬಗ್ಗೆ ಮೃತನ ಸಹೋದರರೇ ದೂರು ನೀಡಿದ್ದಾರೆ. ಚಿನ್ನದ ವ್ಯಾಪಾರಿಗಳೂ ಪ್ರತಿಭಟನೆ ಮಾಡಿ ನ್ಯಾಯಕ್ಕಾಗಿ ಮನವಿ ನೀಡಿದ್ದರು. ಆದರೂ ಆರೋಪಿತರ ಬಂಧನ ಆಗಲಿಲ್ಲ ಎಂದು ಅಸಮಧಾನಿಸಿದರು.

ಈ ವೇಳೆ ರೆಡ್ ಆಂಟ್ ಮಹೇಶ ನಾಯ್ಕ, ಕರ್ನಾಟಕ ರಕ್ಷಣಾ ವೇದಿಕೆ‌ ಉಮೇಶ ಹರಿಕಂತ್ರ, ಈಶ್ವರ ನಾಯ್ಕ, ಅಬ್ದುಲ್ ಹಜೀದ್, ರೋಹಿತ್ ನಾಯ್ಕ ಇತರರು ಇದ್ದರು.

ಇದನ್ನೂ ಓದಿ: AK 47 ಬಳಸಿ ಸಲ್ಮಾನ್ ಖಾನ್ ಹತ್ಯೆಗೆ ಸಂಚು… ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ನಾಲ್ವರ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next