Advertisement

ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆದ ಅಮೂಲ್ಯ-ಜಗದೀಶ್‌

11:08 AM May 17, 2017 | Team Udayavani |

ಇತ್ತೀಚೆಗಷ್ಟೇ ಆದಿಚುಂದನಗಿರಿ ಶ್ರೀಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಮೂಲ್ಯ ಹಾಗೂ ಜಗದೀಶ್‌ ಅವರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮಠಾಧೀಶರಾದ ಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದಿದ್ದಾರೆ.

Advertisement

ಬೆಂಗಳೂರಿನಲ್ಲಿರುವ ಸುಬುಧೇಂದ್ರ ತೀರ್ಥರನ್ನು, ಮಂಗಳವಾರ ಅಮೂಲ್ಯ ಹಾಗೂ ಜಗದೀಶ್‌ ಅಲ್ಲದೆ, ಗಣೇಶ್‌ ಮತ್ತು ಅವರ ಪತ್ನಿ ಶಿಲ್ಪಾ ಸಹ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಇನ್ನು ಮಂಗಳವಾರ ರಾತ್ರಿ ಜಗದೀಶ್‌ ಮತ್ತು ಅಮೂಲ್ಯ ಅವರ ರಿಸೆಪ್ಶನ್‌ ಸಹ ಅದ್ಧೂರಿಯಾಗಿ ನಡೆಯಿತು. ಅಮೂಲ್ಯ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next