Advertisement

ದಿ. ಹೀರಾಬೆನ್‌ ಅವರಿಗೆ ಗೌರವ ಸಮರ್ಪಣೆ

08:20 PM Jan 01, 2023 | Team Udayavani |

ಗಾಂಧಿನಗರ: ಗುಜರಾತ್‌ನ ವಡ್ನಾಗರ್‌ನ ಜವಾಹಾರ್‌ ನವೋದಯ ವಿದ್ಯಾಲಯದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ದಿ. ಹೀರಾಬೆನ್‌ ಅವರ ಸ್ಮರಣಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

ರಾಜಕೀಯ ನಾಯಕರು, ವ್ಯಾಪಾರಿಗಳು, ಕುಟುಂಬಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಹಿತೈಷಿಗಳು ಮಡಿದ ಜೀವಕ್ಕೆ ಶಾಂತಿ ಕೋರಿದರು.

ವಡ್ನಾಗರ್‌ ವ್ಯಾಪಾರಿಗಳು ಶುಕ್ರವಾರದಿಂದ ಭಾನುವಾರದವರೆಗೆ 3 ದಿನಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಮಾರುಕಟ್ಟೆ ಬಂದ್‌ ಮಾಡುವ ಮೂಲಕ ದಿ. ಹೀರಾಬೆನ್‌ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗುಜರಾತ್‌ ವಿಧಾನಸಭೆ ಸ್ಪೀಕರ್‌ ಶಂಕರ್‌ ಚೌಧರಿ, ಕೇಂದ್ರ ಸಚಿವ ಪುರುಷೋತ್ತಮ್‌ ರೂಪಾಲ, ಮಾಜಿ ಡಿಸಿಎಂ ನಿತಿನ್‌ ಪಟೇಲ್‌, ಶಾಸಕರಾದ ಪೂರ್ಣೇಶ್‌ ಮೋದಿ, ಜೇಥಾ ಭಾರವಾಡ್‌, ಬಿಜೆಪಿ ನಾಯಕ ಸಂಜಯ್‌ ಜೋಶಿ, ಮಾಜಿ ಸ್ಪೀಕರ್‌ ನಿಮಾ ಆಚಾರ್ಯ, ಮಾಜಿ ಶಾಸಕಿ ಮಾಯಾ ಕೊಡ್ನಾನಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.


ಪ್ರಧಾನಿ ಮೋದಿ ಅವರ ಸಹೋದರರಾದ ಸೋಮಾಭಾಯ್‌, ಅಮೃತ್‌ಭಾಯ್‌, ಪ್ರಹ್ಲಾದ್‌ಭಾಯ್‌, ಪಂಕಜ್‌ಭಾಯ್‌ ಹಾಗೂ ಸಹೋದರಿ ವಸಂತಿಬೆನ್‌ ಸೇರಿದಂತೆ ಕುಟುಂಬಸ್ಥರು ಉಪಸ್ಥಿತಿರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next