Advertisement

ಶೂಟಿಂಗ್‌ ಮುಗಿಸಿದ ಪ್ರವೇಶ

02:03 PM Oct 18, 2018 | Team Udayavani |

ಪೃಥ್ವಿ ಅಂಬರ್‌, ಬಿಂದುಶ್ರೀ ಮುಖ್ಯ ಭೂಮಿಕೆಯ ‘ಪ್ರವೇಶ’ ಶೂಟಿಂಗ್‌ ಪೂರ್ಣಗೊಳಿಸಿದೆ. ಇಳಾ ವಿಟ್ಲ, ಚಂದ್ರಹಾಸ್‌ ಉಳ್ಳಾಲ್‌, ರಾಧಾಕೃಷ್ಣ, ಚೇತನ್‌ ರೈ ಮಾಣಿ ಸಹಿತ ಹಲವು ಪ್ರಬುದ್ಧ ಕಲಾವಿದರ ಮೂಲಕ ಸಿದ್ಧಗೊಂಡ ಸಿನೆಮಾವಿದು. ಕರಾವಳಿ ಭಾಗದ ಸಾಮರಸ್ಯಕ್ಕೆ ನಿತ್ಯ ಧಕ್ಕೆ ತರುತ್ತಿರುವ ಕಥೆಯಾಧಾರಿತವಾದ ‘ಪ್ರವೇಶ’ ಚೇತನ್‌ ಮುಂಡಾಡಿಯವರ ಸಿನೆಮಾ. 

Advertisement

ಈಗಾಗಲೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡ ಸಿನೆಮಾ ಮಾಡಿದ ಚೇತನ್‌ ಅವರ ಎರಡನೇ ಸಿನೆಮಾ ಆಗಿರುವುದರಿಂದ ಸಹಜವಾಗಿಯೇ ಇದರ ಕುರಿತು ಕುತೂಹಲವಿದೆ. ಕರಾವಳಿ ಭಾಗದಲ್ಲಿಯೇ ಶೂಟಿಂಗ್‌ ಕಂಡ ಈ ಸಿನೆಮಾ ಕೋಸ್ಟಲ್‌ವುಡ್‌ನ‌ಲ್ಲಿ ವಿಭಿನ್ನ ಮ್ಯಾನರಿಸಂ ಮೂಲಕ ಸದ್ದುಮಾಡಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next