Advertisement

ನಾಯಕಿಯ ಹುಡುಕಾಟದಲ್ಲಿ ‘ಕಥಾನಾಯಕ’

12:16 PM Mar 13, 2021 | Team Udayavani |

ಯಾವುದೇ ಚಿತ್ರದಲ್ಲಿ ಒಂದು ಕಥೆ ಇರುತ್ತದೆ. ಆ ಕಥೆಗೆ ಒಬ್ಬ “ಕಥಾ ನಾಯಕ’ ಇರುತ್ತಾನೆ. ಆ “ಕಥಾನಾಯಕ’ನ ಸುತ್ತ ಆ ಚಿತ್ರ ನಡೆಯುತ್ತದೆ. ಆ ಕಥೆಗೆ ಮತ್ತು “ಕಥಾ ನಾಯಕ’ನಿಗೆ ಒಂದು ಹೆಸರು ಇರುತ್ತದೆ. ಅಂಥ ಕಥೆ ಅಥವಾ ನಾಯಕನ ಹೆಸರನ್ನೇ ಸಾಮಾನ್ಯವಾಗಿ ಆ ಚಿತ್ರಕ್ಕೆ ಇಡುವುದನ್ನ ಚಿತ್ರರಂಗದಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಂದು ಚಿತ್ರತಂಡ, ತಮ್ಮ ಚಿತ್ರಕ್ಕೆ “ಕಥಾ ನಾಯಕ’ ಅಂತಲೇ ಹೆಸರಿಟ್ಟಿದೆ. ಅದಕ್ಕೆ ಕಾರಣ ಚಿತ್ರದ ಕಥೆಯೇ ಹಾಗಿದೆಯಂತೆ!

Advertisement

ಅಂದಹಾಗೆ, ನವ ನಿರ್ದೇಶಕ ವಿನಾಯಕ ಜ್ಯೋತಿ “ಕಥಾ ನಾಯಕ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ವಿನಾಯಕ ಜ್ಯೋತಿ, “ಇದೊಂದು ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಸಿನಿಮಾ. ನಾಯಕಿಯ ಹುಟುಕಾಟದ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. ಸಿನಿಮಾದ ಕಥೆ ಮತ್ತು ನಿರೂಪಣೆ ಅನೇಕ ಟರ್ನ್, ಟ್ವಿಸ್ಟ್‌ಗಳನ್ನು ತೆಗೆದುಕೊಳ್ಳುತ್ತ ಸಾಗುತ್ತದೆ.

ಇದನ್ನೂ ಓದಿ:ಮುಂದಿನ ವಾರದಿಂದ ಶುರು “ಮುಂದುವರೆದ ಅಧ್ಯಾಯ”

ಸಿನಿಮಾದಲ್ಲಿ ಮೂವರು ನಾಯಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದೊಂದು ಆಯಾಮದಲ್ಲಿ ಒಬ್ಬೊಬ್ಬರು ಕಥಾನಾಯಕನಾಗಿ ಕಾಣಿಸಿಕೊಳ್ಳುತ್ತಾರೆ. ನಿಜವಾದ ನಾಯಕ ಯಾರು ಅನ್ನೋದು ಸಿನಿಮಾದಲ್ಲೇ ನೋಡಬೇಕು’ ಎನ್ನುತ್ತಾರೆ.

ಈ ಚಿತ್ರದಲ್ಲಿ ಪ್ರವೀಣ್‌ ತೇಜ್‌, ಅರ್ಜುನ್‌ ಕಾಪಿಕಾಡ್‌, ಅಭಿಷೇಕ್‌, ಸಪ್ತಾ ಪಾವೂರ್‌, ಧನುಶ್‌ ಮೊದಲಾದವರು “ಕಥಾ ನಾಯಕ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅಂದಹಾಗೆ, “ಕಥಾ ನಾಯಕ’ ಚಿತ್ರದ ನಾಯಕಿಯ ಹೆಸರನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಅದಕ್ಕೆ ಕಾರಣ ಇಡೀ ಚಿತ್ರದ ಕಥೆ ನಾಯಕಿಯ ಹುಡುಕಾಟದ ಸುತ್ತ ನಡೆಯುತ್ತಿರುವುದಂತೆ. ಹಾಗಾಗಿ ಚಿತ್ರದ ನಾಯಕಿಯ ಹೆಸರನ್ನು ತೆರೆಮೇಲೆ ರಿವೀಲ್‌ ಮಾಡಲಿದ್ದೇವೆ ಎನ್ನುತ್ತದೆ ಚಿತ್ರತಂಡ.

Advertisement

ಇದನ್ನೂ ಓದಿ: ರಕ್ಷಿತ್‌ ಶೆಟ್ಟಿ ಪ್ರೇಮ ಪುರಾಣ: ಸಪ್ತಸಾಗರದಾಚೆ ಇಂಟೆನ್ಸ್‌ ಲವ್‌ಸ್ಟೋರಿ!

“ಕಥಾ ನಾಯಕ’ ಚಿತ್ರದ ಹಾಡುಗಳಿಗೆ ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಕಾರ್ತಿಕ್‌ ಎಸ್‌ ಛಾಯಾಗ್ರಹಣ, ಉಜ್ವಲ್‌ ಚಂದ್ರ ಸಂಕಲನವಿದೆ. ವಿಕ್ರಂ ಮೋರ್‌ ಸಾಹಸವಿದೆ. ಬೆಂಗಳೂರು, ದೆಹಲಿ ಸುತ್ತಮುತ್ತ ಸುಮಾರು 50ಕ್ಕೂ ಹೆಚ್ಚು ದಿನಗಳ ಕಾಲ “ಕಥಾ ನಾಯಕ’ ಚಿತ್ರದ ಶೂಟಿಂಗ್‌ಗೆ ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ. “ವಿನಾಯಕ ಜ್ಯೋತಿ ಚಲನಚಿತ್ರ’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಾಜೇಗೌಡ, ಶ್ರೀನಾಥ್‌ ಸಹ ನಿರ್ಮಾಪಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next