Advertisement

ಪ್ರತಿಭಾ ಕುಳಾಯಿ ವಿರುದ್ಧ ಮಾನಹಾನಿಕರ ಪೋಸ್ಟ್‌:ಆರೋಪಿ ಕೋರ್ಟ್‌ಗೆ ಹಾಜರು,ಪೊಲೀಸ್‌ ಕಸ್ಟಡಿಗೆ

11:32 PM Oct 27, 2022 | Team Udayavani |

ಮಂಗಳೂರು: ಮಾಜಿ ಕಾರ್ಪೊರೇಟರ್‌ ಪ್ರತಿಭಾ ಕುಳಾಯಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕಾರಕ ಪೋಸ್ಟ್‌ ಹಾಕಿದ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿರುವ ಅಡ್ಯಾರ್‌ ಪದವು ನಿವಾಸಿ ಕೆ.ಆರ್‌. ಶೆಟ್ಟಿ ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.

Advertisement

ವಕೀಲರ ಮೂಲಕ ಕೋರ್ಟಿಗೆ ಹಾಜರಾಗಿದ್ದ ಆತನನ್ನು ನ್ಯಾಯಾ ಲಯ ಒಂದು ದಿನ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ. ಕೆ.ಆರ್‌. ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್‌ಗೆ ಇನ್ನೋರ್ವ ಆರೋಪಿ ಶ್ಯಾಮ ಸುದರ್ಶನ್‌ ಭಟ್‌ ಅಶ್ಲೀಲ ಕಮೆಂಟ್‌ ಹಾಕಿದ್ದು, ಆತ ತಲೆಮರೆಸಿಕೊಂಡಿದ್ದಾನೆ. 4 ತಂಡಗಳನ್ನು ರಚಿಸಿ ಆತನಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೋಲ್‌ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದ ಪ್ರತಿಭಾ ಕುಳಾಯಿ ಅವರ ಫೋಟೋ ಒಂದನ್ನು ಕೆ.ಆರ್‌. ಶೆಟ್ಟಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿ “ಇದಕ್ಕೊಂದು ಒಳ್ಳೆಯ ಟೈಟಲ್‌ ಕೊಡಿ ಫ್ರೆಂಡ್ಸ್‌’ ಎಂದು ಕಮೆಂಟ್‌ ಹಾಕಿದ್ದ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ಯಾಮ ಸುದ ರ್ಶನ ಭಟ್‌ ಹೊಸಮೂಲೆ ಮಾನಹಾನಿಕರ ಕಮೆಂಟ್‌ ಮಾಡಿದ್ದ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ, ಬಿಲ್ಲವ ಸಂಘಟನೆಗಳಿಂದ, ವಿವಿಧ ಸಂಘ ಸಂಸ್ಥೆ, ಕಾಂಗ್ರೆಸ್‌ ಸಹಿತ ವಿವಿಧ ರಾಜಕೀಯ ಪಕ್ಷಗಳಿಂದ ವಿವಿಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next