Advertisement

ಕಾರ್ಮಿಕರ ನೆರವಿಗೆ ಮುಂದಾದ ನಟ ಪ್ರಥಮ್

04:37 AM Jul 10, 2020 | Lakshmi GovindaRaj |

ಕೋವಿಡ್‌ 19ನಿಂದಾಗಿ ಅನೇಕ ಚಿತ್ರಗಳ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಸರ್ಕಾರ ಮಾರ್ಗಸೂಚಿಗಳನ್ನು ಪಾಲಿಸಿ ಚಿತ್ರೀಕರಣಕ್ಕೆ ಅನುಮತಿ ನೀಡಿದರೂ, ಅನೇಕ ಚಿತ್ರಗಳ ನಿರ್ಮಾಪಕರು, ನಿರ್ದೇ ಶಕರು, ಕಲಾವಿದರು ಚಿತ್ರೀ ಕರಣಕ್ಕೆ  ಹಿಂದೇಟು ಹಾಕುತ್ತಿದ್ದಾರೆ. ಇದೇ ವೇಳೆ ಚಿತ್ರ ರಂಗದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತಂತ್ರಜ್ಞರು ಮತ್ತು ಕಾರ್ಮಿಕರ ನೆರವಿಗೆ ನಟ ಪ್ರಥಮ್‌ ಮುಂದಾಗಿದ್ದಾರೆ.

Advertisement

ತಮ್ಮ ನಟ ಭಯಂಕರ’ ಚಿತ್ರದಲ್ಲಿ ಕೆಲಸ ಮಾಡಿರುವ ತಂತ್ರ ಜ್ಞರು ಮತ್ತು  ಕಾರ್ಮಿಕರಿಗೆ ದಿನಬಳಕೆಯ ಅಗತ್ಯ ವಸ್ತುಗಳ ಕಿಟ್‌ ಮತ್ತು 3 ಸಾವಿರ ರೂ. ನಗದು ವಿತರಿಸಿದ್ದಾರೆ. ಕೋವಿಡ್‌ 19 ಸಂದರ್ಭದಲ್ಲಿ ಚಿತ್ರರಂಗದ ಕಾರ್ಮಿಕರ ನೆರವಿಗೆ ಮುಂದಾಗಿ ರುವ ಪ್ರಥಮ್‌ ಕಾರ್ಯಕ್ಕೆ ಚಿತ್ರರಂಗದ ಅನೇಕರು ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಥಮ್‌ ಅಭಿನಯದ ನಟ ಭಯಂಕರ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ಕೊನೆಯ ಹಂತದಲ್ಲಿದೆ.

ಎಲ್ಲ ಅಂದುಕೊಂಡಂತೆ ನಡೆದಿದ್ದರೆ “ನಟ ಭಯಂಕರ’ ಇಷ್ಟೊತ್ತಿಗಾಗಲೇ ತೆರೆಗೆ  ಬರಬೇಕಿತ್ತು. ಆದರೆ ಸದ್ಯಕ್ಕೆ ಕೋವಿಡ್‌ 19 ಅನಿಶ್ಚಿತತೆ ಇರುವುದರಿಂದ, ಎಲ್ಲವೂ ತಿಳಿಯಾದ ಬಳಿಕ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ. ಇದೊಂದು ಹೊಸ ಶೈಲಿಯ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವುದು  ಪ್ರಥಮ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next