Advertisement

ತರಕಾರಿ ಮಾರುತ್ತಿರುವ ಪ್ರಥಮ್‌

09:32 AM Apr 02, 2020 | Suhan S |

ಲಾಕೌ ಡೌನ್‌ ನಿಂದಾಗಿ ಒಂದಷ್ಟು ದನ ಊರಿನಲ್ಲಿ ದನ-ಕರು ಮೇಯಿಸಿಕೊಂಡಿದ್ದ ಪ್ರಥಮ್‌ ಈಗ ತರಕಾರಿ ಮಾರುತ್ತಿದ್ದಾರೆ. ಅದು ತುಮಕೂರಿನಲ್ಲಿ. ಹೀಗೆಂದರೆ ನಿಮಗೆ ಆಶ್ವರ್ಯವಾಗಬಹುದು. ಆದರೂ ಸತ್ಯ. ಬಿಗ್‌ ಬಾಸ್‌ ಪ್ರಥಮ್‌ ತುಮಕೂರಿನ ಸುತ್ತಮುತ್ತ ತರಕಾರಿ ಹಾಗೂ ಅಗತ್ಯ ದಿನಸಿಗಳನ್ನು ಮಾರಾಟ ಮಾಡು ತ್ತಿದ್ದಾರೆ.ಇವರಿಗೆ ನಟ ಭಯಂಕರ ಚಿತ್ರದ ನಿರ್ಮಾಪಕ ನಿಲೇಶ್‌ ಸಾಥ್‌ ನೀಡಿದ್ದಾರೆ. ತೀರ ಬಡವರಿಗೆ ಉಚಿತವಾಗಿ ದಿನಸಿ ಹಾಗೂ ತರಕಾರಿಮಾರುತ್ತಿರುವ ಪ್ರಥಮ್‌ ಮಿಕ್ಕವರಿಗೆ ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರಂತೆ. ಪ್ರಥಮ್‌ ಅವರಿಗೆ ಜಿಲ್ಲಾಡಳಿತ ಅಗತ್ಯ ಸೇವೆಯಲ್ಲಿ ನಿರತರು ಎಂಬ ಗುರುತಿನ ಚೀಟಿ ಕೂಡಾ ನೀಡಿದೆಯಂತೆ. ಈ ಮೂಲಕ ಜನರಿಗೆ ಸಹಾಯ ಮಾಡಲು ಪ್ರಥಮ್‌ ಮುಂದಾಗಿದ್ದಾರೆ.

Advertisement

ಸದ್ಯ ಪ್ರಥಮ್‌ “ನಟ ಭಯಂಕರ’ ಎಂಬ ಸಿನಿಮಾ ಮಾಡುತ್ತಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರಕ್ಕೆ ಧ್ರುವ ಸರ್ಜಾ ಸೇರಿದಂತೆ ಅನೇಕರು ನಾನಾ ವಿಷಯದಲ್ಲಿ ಸಾಥ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next