Advertisement

Prashant Kishore; ನಿವೃತ್ತ ಅಧಿಕಾರಿಗಳಿಂದ ನಿತೀಶ್‌ ಸರಕಾರ ನಿರ್ವಹಣೆ

12:49 AM Sep 30, 2024 | Team Udayavani |

ಪಟ್ನಾ: ಬಿಹಾರ ಸರಕಾರವು ನಾಲ್ವರು ನಿವೃತ್ತ ಅಧಿಕಾರಿಗಳಿಂದ ನಡೆಯುತ್ತಿದೆ. ಸಿಎಂ ನಿತೀಶ್‌ ಕುಮಾರ್‌ ಈ ಮಾಜಿ “ಬಾಬು’ಗಳ ಹಿಡಿತದಲ್ಲಿದ್ದಾರೆ ಎಂದು ರಾಜಕೀಯ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಟೀಕಿಸಿದ್ದಾರೆ. 2025ರಲ್ಲಿ ವಿಧಾನಸಭಾ ಚುನಾವಣೆಯು 3 ‘ಎಸ್‌’ಗಳ ನಡುವಿನ ಹೋರಾಟವಾಗಲಿದೆ. ಶರಾಬು, ಸರ್ವೇ, ಮತ್ತು ಸ್ಮಾರ್ಟ್‌ ಮೀಟರ್‌ ಎಂಬ 3 ವಿಚಾರಗಳೇ ಪ್ರಸ್ತುತ ಆಡಳಿತದ ಶವಪೆಟ್ಟಿಗೆಗೆ ಕೊನೆಯ ಮೊಳೆಗಳಾಗಲಿವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next