Advertisement

ನಿತೀಶ್‌ ನಿಮಗೆ ವಯಸ್ಸಾಯ್ತು: ಪ್ರಶಾಂತ್‌ ಕಿಶೋರ್‌ ವ್ಯಂಗ್ಯ

07:39 PM Oct 09, 2022 | Team Udayavani |

ಪಾಟ್ನಾ: ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರಿಗೆ ವಯಸ್ಸಾಯ್ತು. ಇದರಿಂದ ಅವರು ಭ್ರಾಂತಿಗೆ ಒಳಗಾದಂತೆ ಮಾತನಾಡುತ್ತಿದ್ದಾರೆ ಎಂದು ರಾಜಕೀಯ ತಂತ್ರಗಾರಿಕೆ ನಿಪುಣ ಪ್ರಶಾಂತ್‌ ಕಿಶೋರ್‌ ವ್ಯಂಗ್ಯವಾಡಿದ್ದಾರೆ.

Advertisement

“ತಾವು ಯಾರನ್ನು ನಂಬುವುದಿಲ್ಲವೋ ಅಂತಹ ಜನರಿಂದ ನಿತೀಶ್‌ ಸುತ್ತುವರಿದಿರುವುದರಿಂದ ಅವರು ರಾಜಕೀಯವಾಗಿ ಪ್ರತ್ಯೇಕಗೊಂಡಿದ್ದಾರೆ. ಈ ಭಯದಿಂದಲೇ ಅವರು ತಲೆಬುಡ ಇಲ್ಲದಂತೆ ಮಾತನಾಡುತ್ತಿದ್ದಾರೆ,’ ಎಂದು ಕುಹಕವಾಡಿದ್ದಾರೆ.

ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ನಿತೀಶ್‌ ಕುಮಾರ್‌, “ಪ್ರಶಾಂತ್‌ ಕಿಶೋರ್‌ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಜತೆ ಜೆಡಿಯು ಪಕ್ಷವನ್ನು ವಿಲೀನಗೊಳಿಸುವಂತೆ ಅವರು ಸಲಹೆ ನೀಡಿದ್ದರು,’ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಶಾಂತ್‌, “ನಾನು ಬಿಜೆಪಿಯನ್ನು ಬೆಂಬಲಿಸುತ್ತಿದ್ದರೆ, ಕಾಂಗ್ರೆಸ್‌ ಬಲಪಡಿಸಲು ಏಕೆ ಅವರಿಗೆ ಸಲಹೆ ನೀಡುತ್ತೇನೆ?,’ ಎಂದು ಪ್ರಶ್ನಿಸಿದ್ದಾರೆ.

ಬಿಹಾರದಲ್ಲಿ ಪ್ರಶಾಂತ್‌ ಕಿಶೋರ್‌ 3,500 ಕಿ.ಮೀ ಉದ್ದದ ಪಾದಯಾತ್ರೆ ಹಮ್ಮಿಕೊಂಡಿದ್ದು, ಪ್ರಸ್ತುತ ಅದರಲ್ಲಿ ಭಾಗಿಯಾಗಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next