Advertisement

ಪ್ರಸಂಗಸಾಗರ ಮುನಿಶ್ರೀ ಗೋಮಟೇಶ್ವರ ಪೂಜೆ

03:40 AM Jul 04, 2017 | Team Udayavani |

ವೇಣೂರು: ಚಾತುರ್ಮಾಸ್ಯ ಆಚರಣೆಗೆ ವೇಣೂರಿಗೆ ಪುರಪ್ರವೇಶ ನೀಡಿದ ಪುಷ್ಪದಂತ ಶ್ರೀ ಪ್ರಸಂಗ ಸಾಗರ್‌ಜೀಯವರು ವೇಣೂರು ಐತಿಹಾಸಿಕ ಶ್ರೀ ಬಾಹುಬಲಿ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಗೋಮಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಸನಿಹದ ಪಾರ್ಶ್ವನಾಥ ಕಲ್ಲು ಬಸದಿಗೂ ತೆರಳಿ ದರ್ಶನ ಪಡೆದರು. ಮುನಿಶ್ರೀಗಳು ಜು.7ರಿಂದ ಅ.19ರವರೆಗೆ ಚಾತುರ್ಮಾಸ್ಯ ಕೈಗೊಳ್ಳಲಿದ್ದಾರೆ.

Advertisement

ಕಚೇರಿ ಉದ್ಘಾಟನೆ 
ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ವ್ಯವಸ್ಥೆಗೊಳಿಸಲಾದ ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿಯ ಕಚೇರಿಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಈ ವೇಳೆ ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ಶ್ರಾವಕ ಬಂಧುಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next