Advertisement

ಪ್ರಸಾದ್‌ ಆರೋಪಕ್ಕೆ ಫ‌ಲಿತಾಂಶದಲ್ಲಿ ಉತ್ತರ: ಕಾಂಗ್ರೆಸ್‌

11:27 AM Apr 14, 2017 | Team Udayavani |

ಉಡುಪಿ: ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆ ಪ್ರಚಾರ ಸಂದರ್ಭ ಮಾಜಿ ಸಚಿವ ಶ್ರೀನಿವಾಸ್‌ ಪ್ರಸಾದ್‌ ಬಹಿರಂಗ ಸಭೆಯಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ ಮೇಲೆ ಮಾಡಿದ ಆಪಾದನೆಗೆ ಉಪ ಚುನಾವಣೆ ಫ‌ಲಿತಾಂಶ ತಕ್ಕ ಉತ್ತರ ನೀಡಿದೆ. 

Advertisement

ಸಜ್ಜನ, ಸಚ್ಚಾರಿತ್ರ್ಯದ ರಾಜಕಾರಣಿ ಪ್ರಮೋದ್‌ ಮಧ್ವರಾಜ್‌ ಚಾರಿತ್ರ್ಯ ಹರಣ ಮಾಡುವ ಬಿಜೆಪಿ ಅಪ ಪ್ರಚಾರಕ್ಕೆ ಜನ ಬೆಂಬಲ ನೀಡುವುದಿಲ್ಲ ಎಂದು ಸಾಬೀತಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಜನಪರ ಕಾರ್ಯಗಳೇ ಶ್ರೀರಕ್ಷೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ, ಕೆ. ಜನಾರ್ದನ ಭಂಡಾರ್ಕರ್‌, ಭಾಸ್ಕರ್‌ ರಾವ್‌ ಕಿದಿಯೂರು, ರಮೇಶ್‌ಕಾಂಚನ್‌, ಆರ್‌.ಕೆ. ರಮೇಶ್‌ ಪೂಜಾರಿ, ಗಣೇಶ ನೆರ್ಗಿ, ನಾರಾಯಣ ಪಿ. ಕುಂದರ್‌, ಶೇಖರ ಜಿ. ಕೊಟ್ಯಾನ್‌, ಶಶಿರಾಜ್‌ ಕುಂದರ್‌, ಸುಖೇಶ್‌ ಕುಂದರ್‌,ಪ್ರಶಾಂತ ಪೂಜಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next