Advertisement

ಪ್ರಸಾದ್‌ ಫ್ಯಾಸಿಸ್ಟ್‌, ಕಳಲೆ ಗೆಲುವು ಖಚಿತ

12:37 PM Apr 08, 2017 | Team Udayavani |

ಮೈಸೂರು: ಕ್ಷೇತ್ರದ ಅಭಿವೃದ್ಧಿ ಮಾಡದೆ, ದಲಿತರ ಹೆಸರಲ್ಲಿ ದಲಿತರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಾ ಮೂಲಭೂತವಾದಿಗಳ ಜೊತೆ ಕೈಜೋಡಿಸಿರುವ ಶ್ರೀನಿವಾಸಪ್ರಸಾದ್‌ ಒಬ್ಬ ಫ್ಯಾಸಿಸ್ಟ್‌ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹ ದೇವಪ್ಪಟೀಕಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡು ಕ್ಷೇತ್ರದ ದಲಿತ ಮತದಾರರನ್ನು ಯಾರೂ ಗುತ್ತಿಗೆ ಹಿಡಿದಿಲ್ಲ. 60ರ ದಶಕದಲ್ಲಿ ಕಣ್ಮುಚ್ಚಿ ಮತ ಹಾಕುತ್ತಿದ್ದರು. ಈಗ ದಲಿತ ಯುವಕರು ವಿದ್ಯಾ ವಂತ, ವಿಚಾರವಂತರು, ಜಾಗೃತರಾಗಿಧಿದ್ದಾರೆ. ಹೀಗಾಗಿ ಅವರು ಯಾರಿಗೂ ಪೇಟೆಂಟ್‌ ಕೊಟ್ಟಿಲ್ಲ ಎಂದರು.

ತಾವು ಜಿಲ್ಲಾ ಉಸ್ತುವಾರಿ ಮಂತ್ರಿಯಾದ ನಂತರ ಮೂರೂವರೆ ವರ್ಷಗಳಿಂದ ಜಿಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ ಯೋಜನೆಗಳ ಪರಿಣಾ ಮಕಾರಿ ಅನುಷ್ಠಾನದ ಮೂಲಕ ನಂಜನಗೂಡು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಚಾಲನೆ ಕೊಟ್ಟಿದ್ದೇನೆ. ಮುಖ್ಯಮಂತ್ರಿ ಮತ್ತು ತಾನು ಸೇರಿ ಅಭಿವೃದ್ಧಿ ಪರ್ವ ಆರಂಭಿಸಿದ್ದೇವೆ ಎಂದು, ಕಳೆದ ಆರು ತಿಂಗಳಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಮಾಡಿದರು.

ಹೀಗಾಗಿ ಅಭಿವೃದ್ಧಿ ಪರವಾದ ಸೈದ್ಧಾಂತಿಕ ಹೋರಾಟ ತಮ್ಮದು. ಕೋಮುವಾದವನ್ನು ಹಿಮ್ಮೆಟ್ಟಿಸಿ ಜಾತ್ಯತೀತ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಈ ಚುನಾವಣೆ ಸಹಕಾರಿಯಾಗಲಿದೆ. ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಎರಡು ಬಾರಿ ಸೋ ತ ಅನುಕಂಪವಿದೆ. ಹೀಗಾಗಿ ಅತಿ ಹೆಚ್ಚು ಮತಗ ಅಂತ ರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next