Advertisement

ಇಂದು ಪ್ರಣವ್‌ ಭಾಷಣ

03:05 AM Jun 07, 2018 | Team Udayavani |

ನಾಗ್ಪುರ: ಆರ್‌.ಎಸ್‌.ಎಸ್‌.ನ ತೃತೀಯ ವರ್ಷದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಬುಧವಾರ ನಾಗ್ಪುರ ತಲುಪಿದ್ದಾರೆ. ಅವರು ಗುರುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡದ್ದಕ್ಕೆ ಕಾಂಗ್ರೆಸ್‌ ನಾಯಕರಿಂದ ಪ್ರಬಲ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ಮೌನ ಮುರಿದಿದ್ದ ಪ್ರಣವ್‌ ಮುಖರ್ಜಿ ತಮಗೆ ಏನು ಹೇಳಬೇಕೆಂದಿದೆಯೋ ಅದನ್ನು ಕಾರ್ಯಕ್ರಮದಲ್ಲಿಯೇ ಹೇಳುವುದಾಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದರು. ಇದೇ ವೇಳೆ, ತಾವು ಬಿಜೆಪಿ ಸೇರುವ ವದಂತಿಗಳು ಸುಳ್ಳು ಎಂದು ಮುಖರ್ಜಿ ಪುತ್ರಿ ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next