Advertisement

ಆಗಸ್ಟ್ 8ಕ್ಕೆ ಪ್ರಣಬ್ ಮುಖರ್ಜಿಯವರಿಗೆ ‘ಭಾರತ ರತ್ನ’ಪ್ರದಾನ

09:32 AM Jul 29, 2019 | Hari Prasad |

ನವದೆಹಲಿ: ಭಾರತದ ಪರಮೋಚ್ಛ ನಾಗರಿಕ ಗೌರವವಾಗಿರುವ ‘ಭಾರತ ರತ್ನ’ಕ್ಕೆ ಪಾತ್ರರಾಗಿರುವ ದೇಶದ ಮಾಜೀ ರಾಷ್ಟ್ರಪತಿ, ಹಿರಿಯ ಕಾಂಗ್ರೆಸ್ ಮುತ್ಸದ್ಧಿ ಮತ್ತು ಶ್ರೇಷ್ಠ ರಾಜತಂತ್ರಜ್ಞ ಪ್ರಣಬ್ ಮುಖರ್ಜಿಯವರಿಗೆ ಈ ಪ್ರಶಸ್ತಿಯನ್ನು ಆಗಸ್ಟ್ 08ರಂದು ಪ್ರದಾನಿಸಲಾಗುವುದು ಎಂದು ತಿಳಿದುಬಂದಿದೆ.

Advertisement

ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಪ್ರಣಬ್ ಮುಖರ್ಜಿಯವರು ಕಳೆದ ಜನವರಿಯಲ್ಲಿ ಭಾರತ ರತ್ನ ಗೌರವಕ್ಕೆ ಭಾಜನರಾಗಿದ್ದರು. ಇದೇ ದಿನದಂದು ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶ್ ಮುಖ್ ಮತ್ತು ಅಸ್ಸಾಮಿ ಗಾಯಕ ಭುಪೇನ್ ಹಝಾರಿಕಾ ಅವರಿಗೂ ಸಹ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next