Advertisement

ಸುನ್ನಿಗಳನ್ನು ನಾಶಮಾಡುವ ಶಕ್ತಿ ನಮ್ಮಲ್ಲಿದೆ: ಮುತಾಲಿಕ್‌ 

04:04 PM Nov 28, 2017 | |

ಮಂಗಳೂರು: ‘ಈ ದೇಶದಲ್ಲಿ ಹಿಂದು ಮತ್ತು ಮುಸ್ಲಿಮರು ಆನಂದವಾಗಿ ಬದುಕಬೇಕಾದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಇದಕ್ಕೆ ಸುನ್ನಿಗಳು ಅಡ್ಡಬಂದರೆ ಬಾಬರ್‌ನನ್ನು ನಾಶ ಮಾಡಿದಂತೆ ನಿಮ್ಮನ್ನು ನಾಶ ಮಾಡುವ ಶಕ್ತಿ ನಮ್ಮಲ್ಲಿದೆ’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Advertisement

ಸಂಘಟನೆಯ ಸಮಾರಂಭದಲ್ಲಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಒತ್ತಾಯ ಮಾಡಿದ ಅವರು ‘ಈಗಾಗಲೇ 50 % ಇರುವ ಶಿಯಾಗಳು ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ. ಇಡೀ ದೇಶದಲ್ಲಿ ರಾಮನ ಭಕ್ತರು ಇದ್ದಾರೆ, ಮಂದಿರವನ್ನು ಎದುರು ನೋಡುತ್ತಿದ್ದಾರೆ. ಸುನ್ನಿ ಮುಸ್ಲಿಮರು ಹಠ ಬಿಟ್ಟು ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಬೇಕು. ನಾವು ಭಿಕ್ಷೆ ಕೇಳುತ್ತಿಲ್ಲ, ಮಂದಿರ ನಿರ್ಮಾಣ ಕೋಟ್ಯಂತರ ಹಿಂದೂಗಳ ಕನಸು’ಎಂದರು.

ಇದೇ ವೇಳೆ ‘ಸುನ್ನಿಗಳು ಕೋರ್ಟ್‌ನಲ್ಲಿ ದಾಖಲಿಸಿರುವ ಕೇಸ್‌ ವಾಪಾಸು ಪಡೆಯಬೇಕು’ ಎಂದು ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next