Advertisement

ಪ್ರಕಾಶ್‌ ರೈ ಹಾಕಿರುವ ಕೇಸ್‌ ರೀಕಾಲ್‌ ಮಾಡಿಸ್ತೇನೆ: ಪ್ರತಾಪ್‌

07:37 AM Feb 26, 2019 | Team Udayavani |

ಮೈಸೂರು: ನಟ ಪ್ರಕಾಶ್‌ ರೈ ತಮ್ಮ ವಿರುದ್ಧ ಕೇವಲ ಪ್ರಚಾರಕ್ಕಾಗಿ ಟೊಳ್ಳು ಕೇಸ್‌ ಹಾಕಿದ್ದಾರೆ. ಈ ಪ್ರಕರಣ ಸಂಬಂಧ ಮಾ.19ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

Advertisement

ಪ್ರಕಾಶ್‌ ರೈ ಕೇಸ್‌ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ವಾರೆಂಟ್‌ ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನ್ಯಾಯಾಲಯದ ಸಮನ್ಸ್‌ ಅನ್ನು ನಮ್ಮ ಕಚೇರಿಗೆ ಸ್ವೀಕರಿಸಿದ್ದು, ನನ್ನ ಗಮನಕ್ಕೆ ತಂದಿಲ್ಲ. ಹೀಗಾಗಿ ನಾನು ವಿಚಾರಣೆಗೆ ಹಾಜರಾಗಿರಲಿಲ್ಲ.

ಮಾ.19ರಂದು ಈ ಕೇಸ್‌ನ ಸಂಬಂಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿ, ಈ ಕೇಸ್‌ನ್ನು ರೀಕಾಲ್‌ ಮಾಡಿಸುವುದಾಗಿ ತಿಳಿಸಿದರು. ಪ್ರಕಾಶ್‌ ರೈ ಹಾಕಿರುವ ಕೇಸ್‌ನಲ್ಲಿ ಯಾವುದೇ ಉರುಳಿಲ್ಲ, ಹೀಗಾಗಿ ಆ ಕೇಸ್‌ ನಿಲ್ಲೋದಿಲ್ಲ, ನಾನು ಸಾಮಾಜಿಕ ಜಾಲತಾಣದಲ್ಲಿ ಆ ಪೋಸ್ಟ್‌ ಶೇರ್‌ಮಾಡಿದ್ದೆ ಅಷ್ಟೇ.

ಹಾಗೆ ನೋಡಿದರೆ ಆ ಬರವಣಿಗೆ ಬರೆದವರ ಮೇಲೆ ಕೇಸ್‌ ಹಾಕಬಹುದಿತ್ತು. ಜನಸಾಮಾನ್ಯರು ಮಾಡುವ ರೀತಿ ನಾನು ಕೂಡ ಶೇರ್‌ ಮಾಡಿದ್ದಕ್ಕೆ ನನ್ನ ಮೇಲೆ 1 ರೂಪಾಯಿಗೆ ಪ್ರಕಾಶ್‌ ರೈ ಕೇಸ್‌ ಹಾಕಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next