Advertisement

ಉದಯವಾಣಿ ವರದಿಗಾರ ಸಿ.ವೈ.ಮೆಣಶಿನಕಾಯಿರಿಗೆ ಪ್ರಜಾಭೂಷಣ ಪ್ರಶಸ್ತಿ

04:31 PM Jul 02, 2022 | Team Udayavani |

ಬೈಲಹೊಂಗಲ : ಉದಯವಾಣಿಯ ತಾಲೂಕು ವರದಿಗಾರ ಸಿ.ವೈ.ಮೆಣಶಿನಕಾಯಿ ಅವರಿಗೆ ಮಂಡ್ಯ ಕರುನಾಡು ಸೇವಾ ಟ್ರಸ್ಟ್ ವತಿಯಿಂದ ನೀಡುವ ಪ್ರಜಾಭೂಷಣ ಪ್ರಶಸ್ತಿ 2022 ಲಭಿಸಿದೆ.

Advertisement

ಸಿ.ವೈ.ಮೆಣಸಿನಕಾಯಿ ಯವರು ಪತ್ರಿಕಾರಂಗದಲ್ಲಿ ಸಲ್ಲಿಸಿದ ಸಮಗ್ರ ಕಾರ್ಯಕ್ಕಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಜುಲೈ .3 ರಂದು ಮೈಸೂರಿನ ರೋಟರಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ಖ್ಯಾತ ನ್ಯಾಯವಾದಿ ಡಾ.ಬಿ.ರೇವಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸಕ್ರಿಯ ವರದಿಗಾರರ ಸಂಘದ ಅಧ್ಯಕ್ಷ ಡಾ.ವೈ. ರಾಮಕೃಷ್ಣ, ಮೈಸೂರ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ , ಕರುನಾಡು ಸೇವಾ ಟ್ರಸ್ಟ ಅಧ್ಯಕ್ಷ ಅಭಿನಂದನ್ ಎಂ. ಪಾಲ್ಗೊಳ್ಳುವರು.

Advertisement

Udayavani is now on Telegram. Click here to join our channel and stay updated with the latest news.

Next