Advertisement

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌: ಮನೆಗೆ ಭಾಗಶಃ ಹಾನಿ, 50,000 ರೂ. ನಷ್ಟ

08:01 PM Jul 01, 2019 | Team Udayavani |

ಪಡುಬಿದ್ರಿ: ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಸೋಮವಾರ ಮಧ್ಯಾಹ್ನ 1ಗಂಟೆಗೆ ಬೆಂಕಿ ಹತ್ತಿಕೊಂಡು ಎಲ್ಲೂರು ಗ್ರಾಮದ ಕೊಳಚೂರು ಸುಧಾ ಆಚಾರ್ಯ ಎಂಬವರ ಮನೆಯ ಅಡುಗೆ ಕೋಣೆ ಸೇರಿದಂತೆ ಭಾಗಶಃ ಹಾನಿಯಾಗಿದೆ. ಮನೆಯವರು ಲಕ್ಷಾಂತರ ರೂ. ನಷ್ಟ ಸಂಭವಿಸಿರುವುದಾಗಿ ಹೇಳಿದ್ದಾರೆ.

Advertisement

ಸುಧಾ ಆಚಾರ್ಯ ಹತ್ತಿರದ ಮನೆಗೆ ಹಾಲು ತರಲು ಹೋಗಿದ್ದಾಗ ಈ ಅವಘಡವು ಸಂಭವಿಸಿದೆ. ಪದೆಬೆಟ್ಟು ಸುಬ್ರಹ್ಮಣ್ಯ ಯುವಕ ವೃಂದದ ಸದಸ್ಯರು ಆ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ಎಲ್ಲೂರು ಗ್ರಾಮ ಲೆಕ್ಕಿಗ ಅರುಣ್‌ ಹಾನಿಗೀಡಾದ ಮನೆಗೆ ಭೇಟಿ ನೀಡಿದ್ದು ಸುಮಾರು 50000ರೂ. ಗಳಷ್ಟು ನಷ್ಟ ಸಂಭವಿಸಿರುವುದಾಗಿ ಕಾಪು ತಹಶೀಲ್ದಾರ್‌ರಿಗೆ ವರದಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next